ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಧಿಕೃತ ಮನೆ ಬಿಟ್ಟು ಹೋಗಿ: ಮಗ, ಮಗಳಿಗೆ ಯಡಿಯೂರಪ್ಪ (Yaddyurappa | Race Course Road | Official Residence | Home | Nepotism)
Bookmark and Share Feedback Print
 
ಪ್ರತಿಪಕ್ಷಗಳಿಂದ ಸ್ವಜನ ಪಕ್ಷಪಾತ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ದೆಹಲಿಯಿಂದ ಬಂದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ, ತನ್ನ ಅಧಿಕೃತ ನಿವಾಸದಲ್ಲಿದ್ದ ಮಗ, ಮಗಳು ಮತ್ತು ಅಳಿಯರನ್ನು ಬೇರೆ ಕಡೆಗೆ ಹೋಗುವಂತೆ ಸೂಚಿಸಿದ್ದು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಿಂದ ಹೊರಟುಹೋಗುವಂತೆ ಮಗ ಬಿ.ವೈ.ವಿಜಯೇಂದ್ರ, ಮಗಳು ಉಮಾದೇವಿ ಅವರಿಗೆ ಯಡಿಯೂರಪ್ಪ ಸೂಚಿಸಿದಾಗ, ಅವರು ಈ ಮಾತನ್ನು ಪಾಲಿಸಿದರು ಎಂದು ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯೇಂದ್ರ, ಉಮಾದೇವಿ ಮತ್ತು ಆಕೆಯ ಪತಿ ಸೋಹನ್ ಕುಮಾರ್ ಅವರು ಯಡಿಯೂರಪ್ಪ ಅವರೊಂದಿಗೇ ನೆಲಸಿದ್ದರೆ, ಹಿರಿಯ ಮಗ, ಸಂಸದ ಬಿ.ವೈ.ರಾಘವೇಂದ್ರ ಆಗಾಗ್ಗೆ ಈ ಮನೆಗೆ ಬಂದು ಹೋಗುತ್ತಿದ್ದರು.

ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು, ಬಂಧುಗಳನ್ನು ದೂರವಿಟ್ಟು, ರಾಜ್ಯದ ಜನತೆಗೆ ಹತ್ತಿರವಾಗುತ್ತೇನೆ ಎಂದಿದ್ದರು. ಯಡಿಯೂರಪ್ಪ ಅವರು ತಮ್ಮ ಮಕ್ಕಳಿಗೆ, ಸೊಸೆಗೆ ಡೀನೋಟಿಫೈ ಮಾಡುವ ಮೂಲಕ ಜಮೀನು ಕೊಡಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರು.

ಇದೀಗ, ಯಾವುದೇ ಸಂದರ್ಭದಲ್ಲಿಯೂ ತಮ್ಮ ಕುಟುಂಬ ಸದಸ್ಯರ ಯಾವುದೇ ಮಾತಿನಿಂದ ಪ್ರಭಾವಕ್ಕೊಳಗಾಗದಿರುವಂತೆಯೂ, ಹೀಗೇನಾದರೂ ತಿಳಿದರೆ ತಮ್ಮ ಗಮನಕ್ಕೆ ತರುವಂತೆಯೂ ಯಡಿಯೂರಪ್ಪ ತಮ್ಮ ಕಾರ್ಯದರ್ಶಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಬಂಧುಗಳನ್ನು ಅಧಿಕಾರ ಕೇಂದ್ರದಿಂದ ದೂರವಿಡುವಂತೆ ಕೇಂದ್ರದ ಹೈಕಮಾಂಡ್ ಯಡಿಯೂರಪ್ಪರಿಗೆ ಸೂಚಿಸಿತ್ತು.

ಇವನ್ನೂ ನೋಡಿ...
ಯಡಿಯೂರಪ್ಪ ಪಟ್ಟ ಉಳಿಯಲು ಕಾರಣಗಳು...
ಜಾತಿ ರಾಜಕೀಯ, ರಾಜಕೀಯವೇ ಜಾತಿ...
ಸಂಬಂಧಿತ ಮಾಹಿತಿ ಹುಡುಕಿ