ಇತ್ತೀಚೆಗಷ್ಟೇ ಕಾಣೆಯಾಗಿದ್ದ... ನೇಪಾಳದ ಗಾಧಿಮಾಯಿ ಎಂಬ ಹಿಂದೂ ಧರ್ಮದ ಮೇಳದಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿಯನ್ನು ನಿಲ್ಲಿಸಬೇಕೆಂಬ ಉದ್ದೇಶದಿಂದ ಆರು ತಿಂಗಳ ಹಿಂದೆ ಹಾಲ್ಖೋರಿಯಾ ದಾಹಾ ಅರಣ್ಯ ಪ್ರದೇಶಕ್ಕೆ ಹೋಗುತ್ತಿದ್ದಾಗ ಕಾಣೆಯಾಗಿದ್ದ ಬಹದ್ದೂರ್ ಇದೀಗ ಚೂರಿಯಾ ಬೆಟ್ಟ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾನೆ.
ತನ್ನ ಆರು ವರ್ಷಗಳ ಧ್ಯಾನಾವಧಿಯನ್ನು ಪೂರ್ತಿಗೊಳಿಸುವ ಸಲುವಾಗಿ ಹಲ್ಕೋರಿಯಾ ಪ್ರದೇಶದಲ್ಲಿ ಗದ್ದಲವಿದ್ದುದರಿಂದ ಶಾಂತ ಪರಿಸರವನ್ನು ಹುಡುಕಿಕೊಂಡು ಚೂರಿಯಾ ಬೆಟ್ಟಕ್ಕೆ ಹೋಗಿದ್ದೆ ಎಂದು ಆಧುನಿಕ ಬುದ್ಧ ತಿಳಿಸಿದ್ದಾನೆಂದು ಪತ್ರಿಕೆಗಳು ವರದಿ ಮಾಡಿವೆ.
ಅದೇ ಹೊತ್ತಿಗೆ ಈ ಬುದ್ಧನ ದೈಹಿಕ ಅವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅವರನ್ನು ಭೇಟಿ ಮಾಡಿರುವವರು ತಿಳಿಸಿದ್ದಾರೆ. ತಾನು ಕಂಡುಕೊಂಡ ಜ್ಞಾನವನ್ನು ಮುಂದಿನ ವರ್ಷ ಪ್ರವಚನಗಳ ಮೂಲಕ ಎಲ್ಲರಿಗೂ ತಿಳಿಸುವುದಾಗಿ ಅವರು ಹೇಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಹಿಂದೆಯೂ ಇದ್ದಕ್ಕಿಂದ್ದಂತೆ ಕಾಣೆಯಾಗುತ್ತಿದ್ದ ಬುದ್ಧನಿಗೆ ಸ್ಥಳೀಯ ಭದ್ರತಾ ಸಮಿತಿಯು ಭದ್ರತೆಯನ್ನು ಒದಗಿಸಿತ್ತು. ಆದರೂ ಧ್ಯಾನಸ್ಥನಾಗಿದ್ದ ಬುದ್ಧ ಯಾರಿಗೂ ತಿಳಿಯದಂತೆ ಅಲ್ಲಿಂದ ತಪ್ಪಿಸಿಕೊಂಡಿದ್ದ. ನೇಪಾಳ ಸರಕಾರವೇ ಸ್ವತಃ ಈತನ ಬಗ್ಗೆ ಹೆಚ್ಚು ಆಸ್ಥೆ ವಹಿಸಿತ್ತು.