ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಾಂಗ್ಲಾದಲ್ಲಿ ಭಯೋತ್ಪಾದನೆ ಜಾಲ ವಿಸ್ತರಿಸಿದ ದಾವೂದ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಂಗ್ಲಾದಲ್ಲಿ ಭಯೋತ್ಪಾದನೆ ಜಾಲ ವಿಸ್ತರಿಸಿದ ದಾವೂದ್
ಅಂತಾರಾಷ್ಟ್ರೀಯ ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ 1995ರಲ್ಲೇ ಬಾಂಗ್ಲಾದೇಶದಲ್ಲಿ ತನ್ನ ಭಯೋತ್ಪಾದನೆ ಜಾಲವನ್ನು ಸ್ಥಾಪಿಸಿದ್ದು, 2000ದಿಂದೀಚೆಗೆ ತನ್ನ ಸಖ್ಯವನ್ನು ವಿಸ್ತರಿಸಿದ್ದಾನೆಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೂರ್ವ ಬಾಂಗ್ಲಾದೇಶದಲ್ಲಿ ಬ್ರಹ್ಮನ್‌ಬಾರಿಯ ಗ್ರಾಮದ ಬಳಿ ಅಡಗಿದ್ದ ದಾವೂದ್ ಇಬ್ರಾಹಿಂ ಸಂಗಡಿಗ ಅಬ್ದುರ್ ರೌಫ್ ದೌದ್ ಮರ್ಚೆಂಟ್ ಎಂಬವನನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಮೇಲಿನ ವಿಷಯ ಬೆಳಕಿಗೆ ಬಂದಿದೆ. ಭೂಗತದೊರೆ ದಾವೂದ್‌ಗೆ ನಿಷ್ಠವಾದ ಭಯೋತ್ಪಾದನೆ ತಂಡವನ್ನು ಹುಟ್ಟುಹಾಕುವ ಯೋಜನೆಯೊಂದಿಗೆ ಮರ್ಚೆಂಟ್ ರಾಷ್ಟ್ರಕ್ಕೆ ಕಾಲಿರಿಸಿದ್ದ.

ಬಾಲಿವುಡ್ ಸಂಗೀತ ನಿರ್ದೇಶಕ ಗುಲ್ಶನ್ ಕುಮಾರ್ ಹತ್ಯೆಯಲ್ಲಿ ತಪ್ಪಿತಸ್ಥನಾದ ಮರ್ಚೆಂಟ್ ಬಂಧನದಿಂದ ಅನೇಕ ಸುಳಿವುಗಳು ಬಾಂಗ್ಲಾ ಅಧಿಕಾರಿಗಳಿಗೆ ಸಿಕ್ಕಿದೆ. ದಾವೂದ್ ಭೂಗತಲೋಕದ ಜಾಲ ದಕ್ಷಿಣ ಏಷ್ಯಾದ್ಯಂತ ವಿಸ್ತರಿಸಿದೆಯೆಂಬ ನವದೆಹಲಿಯ ಆರೋಪವು ತನಿಖೆಯಿಂದ ದೃಢಪಟ್ಟಿರುವುದಾಗಿ ವಿಶ್ಲೇಷಕರು ಹೇಳಿದ್ದಾರೆ.

ದಾವೂದ್ ಮತ್ತು ಎರಡನೇ ಕಮಾಂಡ್ ಚೋಟಾ ಶಕೀಲ್ ಪಾಕಿಸ್ತಾನ ಮತ್ತು ದುಬೈನಿಂದ ಕಾರ್ಯಾಚರಿಸುತ್ತಿದ್ದಾರೆಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ. ಸ್ಥಳೀಯ ಭೂಗತಜಾಲ ಮತ್ತು ಪ್ರಭಾವಿವ್ಯಕ್ತಿಗಳ ಜತೆ ಸಂಪರ್ಕ ಸಾಧಿಸಲು ಮರ್ಚೆಂಟ್ 1995ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದನೆಂದು ತನಿಖಾವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2008-09ರಲ್ಲಿ ಒಟ್ಟು 1447 ಭಾರತೀಯರ ಮೇಲೆ ದಾಳಿ
ಹಾವು ಕಡಿದ ಕೋಳಿಮಾಂಸ ಬಡಿಸುವ ಚೀನಾ ರೆಸ್ಟೊರೆಂಟ್
ಅಲ್ ಖಾಯಿದಾದಿಂದ ಬ್ರಿಟನ್ ಒತ್ತೆಯಾಳು ಹತ್ಯೆ
ಸ್ವಲ್ಪದರಲ್ಲಿ ತಪ್ಪಿದ ಎರಡು ವಿಮಾನಗಳ ಡಿಕ್ಕಿ
ಮೆಲ್ಬೋರ್ನ್‌ನಲ್ಲಿ ಇನ್ನೊಬ್ಬ ವಿದ್ಯಾರ್ಥಿ ಮೇಲೆ ದಾಳಿ
ಸಯೀದ್ ಬಿಡುಗಡೆಗೆ ಭಾರತದ ನಿರಾಶೆ ಸರಿಯಲ್ಲ: ಪಾಕ್
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com