ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರ್ಗಾವಣೆ ಬಿಸಿ: ಮಾಯಾ ಸರ್ಕಾರಕ್ಕೆ ಸುಪ್ರೀಂ ನೋಟಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರ್ಗಾವಣೆ ಬಿಸಿ: ಮಾಯಾ ಸರ್ಕಾರಕ್ಕೆ ಸುಪ್ರೀಂ ನೋಟಿಸ್
PTI
ಉತ್ತರ ಪ್ರದೇಶದಲ್ಲಿ ನಿರಂಕುಶವಾಗಿ ಮತ್ತು ವಿಚಾರಹೀನ ನೆಲೆಯಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಮುಖ್ಯಮಂತ್ರಿ ಮಾಯಾವತಿ ಕ್ರಮದ ವಿರುದ್ಧ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸೋಮವಾರ ಮಾಯಾ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸುಪ್ರೀಂಕೋರ್ಟ್‌ ರಜಾಕಾಲ ಪೀಠದ ನ್ಯಾಯಾಧೀಶರಾದ ಸುದರ್ಶನ್ ರೆಡ್ಡಿ ಮತ್ತು ನ್ಯಾಯಮೂರ್ತಿ ಅಬ್‌ತಾಬ್ ಅಲಾಂ ಅವರನ್ನೊಳಗೊಂಡ ಪೀಠ, ಈ ನೋಟಿಸ್ ಜಾರಿ ಮಾಡಿ ನಾಲ್ಕು ವಾರದೊಳಗೆ ಉತ್ತರ ನೀಡುವಂತೆ ಸೂಚಿಸಿದೆ.

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಮಾಯಾವತಿಯವರು ಐಎಎಸ್ ಅಧಿಕಾರಿಗಳನ್ನು ವಿವೇಚನಾರಹಿತರಾಗಿ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸತ್ಯಾ ನರೈನ್ ಶುಕ್ಲಾ ಎಂಬವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಐಎಎಸ್ ಅಧಿಕಾರಿಗಳನ್ನು ನೈತಿಕ ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಬೇಕೆ ವಿನಃ, ನಿರಂಕುಶ ನೆಲೆಯಲ್ಲಿ ವರ್ಗಾವಣೆ ಮಾಡುವುದು ಸಂವಿಧಾನ ವಿರೋಧಿ ಕ್ರಮ ಎಂದು ಅರ್ಜಿಯಲ್ಲಿ ದೂರಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಹಿಳಾ ಮೀಸಲಾತಿ: ಶರದ್ ನಂತರ ಮುಲಾಯಂ ವಿರೋಧ
ಕರಿಯಾ ಮುಂಡಾ ಸಂಸತ್‌‌ನ ಡೆಪ್ಯುಟಿ ಸ್ಪೀಕರ್
ನಾಯಕತ್ವ ಕಲಿಯಲು ಎಚ್‌ಡಿಕೆ 'ಅಮೆರಿಕ ವಿವಿ'ಗೆ
ಕೇರಳ ರಾಜ್ಯಪಾಲ ಗವಾಯಿಗೆ ಕೊಲೆ ಬೆದರಿಕೆ!
ಪಿಣರಾಯ್ ತನಿಖೆ: ಗವರ್ನರ್ ಆದೇಶ ರಾಜಕೀಯ ಪ್ರೇರಿತ
ಬಂಧಿತ ಪಾಟೀಲ್ ವಜಾಕ್ಕೆ 'ಪವಾರ್' ಮೇಲೆ ಒತ್ತಡ