ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕರುಪ್ಪಸ್ವಾಮಿ ದೈವವಾಗಿ ಪೂಜೆಗೊಳ್ಳುತ್ತಿದ್ದ ಮಹಾವೀರ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರುಪ್ಪಸ್ವಾಮಿ ದೈವವಾಗಿ ಪೂಜೆಗೊಳ್ಳುತ್ತಿದ್ದ ಮಹಾವೀರ!
ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಾಪನಾಶಂ ಸಮೀಪವಿರುವ ಗ್ರಾಮವೊಂದರಲ್ಲಿ ಹಲವು ಸಮಯದಿಂದ 'ಕರುಪ್ಪಸ್ವಾಮಿ' ಎಂಬ ಹೆಸರಿನಲ್ಲಿ ಆರಾಧನೆಗೊಳ್ಳುತ್ತಿದ್ದ ಪ್ರತಿಮೆಯೊಂದು ಇದೀಗ ಮಹಾವೀರ ಪ್ರತಿಮೆ ಎಂಬುದು ದೃಢಪಟ್ಟಿದೆ!

ಪ್ರಾಚ್ಯವಸ್ತು ಸಂಶೋಧನೆಯಲ್ಲಿ ನಿರತವಾಗಿರುವ ದೆಹಲಿ ನೆಹರೂ ಟ್ರಸ್ಟ್ ಅಧಿಕಾರಿಗಳು ಈ ಪ್ರದೇಶಕ್ಕೆ ಆಗಮಿಸಿ, ಇದು ಪದ್ಮಾಸನ ಸ್ಥಿತಿಯಲ್ಲಿರುವ ಜೈನ ತೀರ್ಥಂಕರ ಮಹಾವೀರನ ಪ್ರತಿಮೆ ಎಂದು ಖಚಿತಪಡಿಸಿದ್ದಾರೆ. ಪ್ರತಿಮೆಯು ಮೂರು ಅಡಿ ಎತ್ತರ ಹಾಗೂ 2.25 ಅಡಿ ಅಗಲವಿದೆ.

ಈ ಪ್ರತಿಮೆಯು ಚೋಳರ ಕಾಲದ್ದಾಗಿದ್ದು, ಅಂದು ದೇಶದ ಕೆಲವು ಭಾಗಗಳಲ್ಲಿ ಜೈನ ಧರ್ಮ ಪ್ರಚಲಿತದಲ್ಲಿತ್ತು. ಆದರೆ, ಈ ಪ್ರತಿಮೆಯನ್ನು ಸ್ಥಳೀಯರು ಕರುಪ್ಪಸ್ವಾಮಿ ದೇವರು ಎಂದೇ ಪೂಜೆ, ಅಭಿಷೇಕ, ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕರುಪ್ಪಸ್ವಾಮಿ ಎಂಬುದು ತಮಿಳುನಾಡಿನ ಒಂದು ಕುಲದೇವರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಲಿಪಶು ಹುಡುಕಾಟದ ಭಾರದಲ್ಲಿ ನಲುಗುತ್ತಿರುವ ಬಿಜೆಪಿ
ತಿರುಪತಿ ತಿಮ್ಮಪ್ಪನ ಮಾಣಿಕ್ಯ ಹರಾಜಿಗಿದೆ!?
ವಿಜ್ಞಾನಿ ಮಹಾಲಿಂಗಂ ಪತ್ತೆಗೆ ಕ್ರಮ: ಚಿದಂಬರಂ
ಜಸ್ವಂತ್ ವಿರುದ್ಧ ಕ್ರಮ ತಳ್ಳಿಹಾಕಿದ ಬಿಜೆಪಿ
ಜೂನ್ 15ರಿಂದ ಅಮರನಾಥ ತೀರ್ಥಯಾತ್ರೆ
ಜಾರ್ಖಂಡ್: ನಕ್ಸಲ್ ಅಟ್ಟಹಾಸಕ್ಕೆ 16 ಪೊಲೀಸರ ಬಲಿ