ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಮ್ಮ ತಪ್ಪಿನಿಂದಾಗಿ ಬಿಜೆಪಿಗೆ 10 ಸ್ಥಾನ: ಕುಮಾರಸ್ವಾಮಿ (BJP | Congress | JDS | Kumaraswamy | Yeddyurappa)
Bookmark and Share Feedback Print
 
NRB
'ನಮ್ಮ ತಪ್ಪಿನಿಂದಾಗಿ ಬಿಜೆಪಿಗೆ 10ಸ್ಥಾನ ದೊರೆಯುವಂತಾಗಿದೆ. ಇದು ಬಿಜೆಪಿಗೆ ದೊರೆತ ನೈತಿಕ ಜಯವಲ್ಲ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮೇಲುಗೈ ಸಾಧಿಸಿದ್ದರೂ ಕೂಡ, ಬಿಜೆಪಿ 10 ಸ್ಥಾನಗಳನ್ನು ಪಡೆದಿರುವ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಹಣ ಹಾಗೂ ಅಧಿಕಾರದ ಬಲದಿಂದ ಬಿಜೆಪಿಗೆ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮತದಾರರೇ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿಯ ದುರಾಡಳಿತವನ್ನು ಕೊನೆಗಾಣಿಸುವುದೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಉದ್ದೇಶ ಎಂದು ತಿಳಿಸಿದರು. ಹಣದ ಮೂಲಕ ಅಧಿಕಾರ ದುರ್ಬಳಕೆ ಹಾಗೂ ದಬ್ಬಾಳಿಕೆಯಿಂದ ಮೇಲ್ಮನೆ ಚುನಾವಣೆಯಲ್ಲಿ ಜಯಗಳಿಸುವ ಬಿಜೆಪಿಯ ಅಹಂಕಾರಕ್ಕೆ ಮತದಾರರೇ ಕಡಿವಾಣ ಹಾಕಿದ್ದಾರೆ ಎಂದರು.

ನಮ್ಮ ಮೈತ್ರಿಯನ್ನು ಮತದಾರ ಮೆಚ್ಚಿ, ಬಿಜೆಪಿಯನ್ನು ಉರುಳಿಸಲಿದ್ದಾನೆ. ಈಗಲಾದರೂ ಹಣ, ಅಧಿಕಾರದಿಂದ ಗೆಲ್ಲಬಹುದೆಂಬ ತನ್ನ ಮನೋಭಾವವನ್ನು ಬಿಜೆಪಿ ಈಗಲಾದರೂ ಸರಿಪಡಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ