ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆರ್‌ಜೆಡಿ ಪರಿತ್ಯಕ್ತರಿಗೆ ನಿತೀಶ್ ತೆರೆದತೋಳಿನ ಸ್ವಾಗತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಜೆಡಿ ಪರಿತ್ಯಕ್ತರಿಗೆ ನಿತೀಶ್ ತೆರೆದತೋಳಿನ ಸ್ವಾಗತ
ಆರ್‌ಜೆಡಿ ಹಾಗೂ ಇತರ ವಿರೋಧ ಪಕ್ಷಗಳ ಪರಿತ್ಯಕ್ತ ನಾಯಕರನ್ನು ಆಡಳಿತಾರೂಢ ಜೆಡಿಯು ಪಕ್ಷವು ತೆರೆದ ತೋಳಿನಿಂದ ಸ್ವಾಗತಿಸುತ್ತದೆ ಎಂಬುದಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಜೆಡಿಯುಗೆ ಸೇರುವ ಆಯ್ಕೆಯು ಎಲ್ಲರಿಗೂ ಮುಕ್ತವಾಗಿದೆ. ಇತ್ತೀಚೆಗೆ ಆರ್‌ಜೆಡಿ ಮತ್ತು ಇತರ ವಿರೋಧ ಪಕ್ಷಗಳನ್ನು ತೊರೆದವರೂ ಸಹ ನಮ್ಮ ಪಕ್ಷಕ್ಕೆ ಬರಬಹುದು ಎಂಬುದಾಗಿ ನಿತೀಶ್ ಕುಮಾರ್ ಹೇಳಿದ್ದಾರೆ. ಲಾಲೂಪ್ರಸಾದ್ ಯಾದವ್ ಅವರ ನಂಬುಗೆಯ ಬಂಟರಾಗಿದ್ದ ಶ್ಯಾಮ್ ರಜಾಕ್ ಮತ್ತು ರಾಮ್ ನಿಹೋರಾ ಯಾದವ್ ಅವರುಗಳು ಲಾಲೂ ಅವರನ್ನು ತೊರೆಯುತ್ತಾರೆ ಎಂಬ ವಿಚಾರದ ಕುರಿತು ಅವರ ಗಮನ ಸೆಳೆದಾಗ ಅವರು ಈ ಆಹ್ವಾನ ನೀಡಿದ್ದಾರೆ.

ಆರ್‌ಜೆಡಿಗೆ ರಾಜೀನಾಮೆ ನೀಡಿದವರು ಅಥವಾ ಇತರ ವಿರೋಧ ಪಕ್ಷಗಳ ಸದಸ್ಯರು ಯಾರೇ ಆದರೂ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಬಯಸಿದರೆ ಅವರನ್ನು ಮುಕ್ತ ಬಾಹುಗಳಿಂದ ಸ್ವಾಗತಿಸಲಾಗುವುದು ಎಂದು ಅವರು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೈಲಿನಲ್ಲಿ ಒಳ್ಳೆಯ ಆಹಾರ ಕೊಡಿ: ಮಮತಾ ತಾಕೀತು
ಹೊಸಾ ಲವ್ ಸ್ಟೋರಿ: ಫಿಜಾ ಕ್ಷಮೆ ಯಾಚಿಸಿದ ಚಾಂದ್!
ಇಂದಿನಿಂದ ಅಮರನಾಥ ಯಾತ್ರೆ ಆರಂಭ
ಮ‌ೂವರು ಮಾವೋವಾದಿ ಉಗ್ರರ ಹತ್ಯೆ
ಪದ್ಮಸಿನ್ಹ ಪಾಟೀಲ್ ಕಸ್ಟಡಿ ಅವಧಿ ವಿಸ್ತರಣೆ
ಅತ್ಯಾಚಾರ ಆರೋಪಿಗಳಿಗೆ ತ್ವರಿತಕೋರ್ಟ್ ವಿಚಾರಣೆ