ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಒಲ್ಲದ ಮದುವೆ:ವೇದಿಕೆಯಿಂದ ಹೊರನಡೆದ ವಧು!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಲ್ಲದ ಮದುವೆ:ವೇದಿಕೆಯಿಂದ ಹೊರನಡೆದ ವಧು!
Marriage
WD
ಇದೊಂದು ಅಪರೂಪದ ಘಟನೆ, ಬಲವಂತದ ಮದುವೆಗೆ ಒಪ್ಪದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳು ಮುಹೂರ್ತದ ಸಮಯಕ್ಕೆ ಪ್ರತಿಭಟನೆ ನಡೆಸಿ ವಿವಾಹ ವೇದಿಕೆಯಿಂದ ಹೊರನಡೆದ ಘಟನೆ ಶುಕ್ರವಾರ ನಡೆದಿದೆ.

ಸಮಾನ ಮನಸ್ಕರ ಒಕ್ಕೂಟ ಕೆಂಗೇರಿಯಲ್ಲಿ ಶುಕ್ರವಾರ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ಕನಕಪುರ ತಾಲೂಕಿನ ನಾರಾಯಣಪುರದ ನಿವಾಸಿ ಲಕ್ಷ್ಮಿ(16) ಪೋಷಕರ ಬಲವಂತದ ವಿವಾಹವನ್ನು ವಿರೋಧಿಸಿ ಹೊರನಡೆದ ಘಟನೆ ನಡೆಯಿತು.

ಘಟನೆ ವಿವರ: ಹದಿನಾರರ ಬಾಲೆ ಲಕ್ಷ್ಮಿ ದೊಡ್ಡ ಬ್ಯಾಲಾಳು ಗ್ರಾಮದ ಸ್ವಾಮಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಲಕ್ಷ್ಮಿ ರಾಮಸ್ವಾಮಿ ಜತೆ ಹಸೆಮಣೆ ಏರುವಂತೆ ಪೋಷಕರು ಒತ್ತಡ ಹೇರಿದ್ದರು. ಏಕೆಂದರೆ ಲಕ್ಷ್ಮಿಯ ಸಹೋದರ ಹಾಗೂ ರಾಮಸ್ವಾಮಿಯ ತಂಗಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇದೇ ವೇದಿಕೆಯಲ್ಲಿ ಅವರು ಮದುವೆಯಾದರು. ಆದರೆ ಲಕ್ಷ್ಮಿ ತನಗೆ ಇಷ್ಟವಿಲ್ಲದ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಳು.

ಷೋಷಕರು ಲಕ್ಷ್ಮಿಯನ್ನು ಬಲವಂತವಾಗಿ ಒಪ್ಪಿಸಿ ಸಾಮೂಹಿಕ ವಿವಾಹಕ್ಕೆ ಕರೆತಂದಿದ್ದರು. ಮುಹೂರ್ತ ಸಮಯದಲ್ಲಿ ಮಾಂಗಲ್ಯ ಧಾರಣೆ ಮಾಡುವಂತೆ ಆಯೋಜಕರು ಪ್ರಕಟಿಸುತ್ತಿದ್ದಂತೆ ಲಕ್ಷ್ಮಿ ಅಲ್ಲಿಂದ ಎದ್ದು ನಿಂತ, ಈ ಮದುವೆ ತನಗೆ ಇಷ್ಟ ಇಲ್ಲ ಎಂದು ಬೊಬ್ಬಿಟ್ಟಳು. ಇದರಿಂದಾಗಿ ಕೆಲ ಕಾಲ ಗೊಂದಲ ಉಂಟಾಗಿ, ಮಾಲೆ, ಮಾಂಗಲ್ಯ ಹಿಡಿದು ನಿಂತಿದ್ದ ರಾಮಸ್ವಾಮಿ ಕೂಡ ಕಂಗಾಲು!

ಲಕ್ಷ್ಮಿಯ ಈ ನಿಲುವಿನಿಂದ ಪೋಷಕರು ಎಳೆದಾಡಿ ರಂಪಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನ ಮಾಡಿದರು. ನಂತರ ಆಕೆಯನ್ನು ಪೋಷಕರೊಂದಿಗೆ ಕಳುಹಿಸಿಕೊಟ್ಟರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯೋಧರಿಗೂ ಸಿಗದ ಅಭಿಷೇಕ್ ಮೃತದೇಹ
ರಾಜ್ಯ ಸರ್ಕಾರದ ಜತೆ ಸಂರ್ಘರ್ಷ ಇಲ್ಲ : ರೇವಣ್ಣ
ಸರ್ಕಾರ ಬಲಿಷ್ಠವಾಗಿದೆ: ಬಿ.ಎಸ್.ಯಡಿಯೂರಪ್ಪ
ಪಕ್ಷದಲ್ಲಿ ಶಿಸ್ತು ಕಾಪಾಡಿ: ಅರುಣ್ ಜೇಟ್ಲಿ ಎಚ್ಚರಿಕೆ
ಸಿಎಂ ಮತ್ತು ನಮ್ಮ ನಡುವೆ ರಗಳೆ ಇಲ್ಲ: ರೆಡ್ಡಿ
ಮಹಾಲಿಂಗಂ ಬಳಿ ರಹಸ್ಯ ದಾಖಲೆ ಇರ್ಲಿಲ್ಲ: ನಾಗೇಶ್ವರ್