ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಡಿಕೆಶಿ ಗೂಂಡಾಗಳಿಂದ ಪ್ರಾಣ ಬೆದರಿಕೆ: ತೇಜಸ್ವಿನಿ (Council Election | D.K. Shivkumar | Tejaswini | Congress | Goonda Culture)
Bookmark and Share Feedback Print
 
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ರಾಜ್ಯದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಕಾರಣರಾಗಿದ್ದು, ಅವರ ರಾಜೀನಾಮೆಗೆ ಟಿವಿಯಲ್ಲಿ ಒತ್ತಾಯಿಸಿದ ಮಾಜಿ ಸಂಸದೆ ತೇಜಸ್ವಿನಿ ಶ್ರೀರಮೇಶ್ ವಿರುದ್ಧ ಗೂಂಡಾಗಳು, ಆಕೆ ಹೇಳಿಕೆ ನೀಡಿದ ಟಿವಿ-9 ಕಚೇರಿಗೇ ಬಂದು ದಾಂಧಲೆ ನಡೆಸಿದ ಘಟನೆ ಸೋಮವಾರ ನಡೆಯಿತು.

ತೇಜಸ್ವಿನಿ ಅವರು ಟಿವಿ-9ಗೆ ಹೇಳಿಕೆ ನೀಡಿ ಕಚೇರಿಯಿಂದ ಹೊರಗೆ ಬರುತ್ತಿದ್ದಂತೆಯೇ, ಅಲ್ಲಿ ನೆರೆದಿದ್ದ ಎನ್ಎಸ್‌ಯುಐ ಕಾರ್ಯಕರ್ತರೆಂದು ಹೇಳಿಕೊಂಡ ಕೆಲವು ಮಂದಿ ಆಕೆಯ ವಿರುದ್ಧ ಘೋಷಣೆ ಕೂಗಿ ತೀವ್ರ ಪ್ರತಿಭಟನೆ ಮಾಡಿದರು. ಕೊನೆಗೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಬೇಕಾಯಿತು.

ಆ ಬಳಿಕ ಟಿವಿ-9 ಸ್ಟುಡಿಯೋದಲ್ಲಿ ಮತ್ತೆ ಪ್ರತಿಕ್ರಿಯೆ ನೀಡಿದ ತೇಜಸ್ವಿನಿ, ತನಗೆ ಮತ್ತು ತಮ್ಮ ಪತಿ, ಮಕ್ಕಳಿಗೆ ಡಿಕೆಶಿ ಕಡೆಯ ಗೂಂಡಾಗಳಿಂದ ಪ್ರಾಣ ಬೆದರಿಕೆಯಿದ್ದು, ತಮಗೆ ಏನೇ ಆದರೂ, ಅದಕ್ಕೆ ಡಿಕೆಶಿ ನೇರ ಹೊಣೆ ಎಂದು ಆರೋಪಿಸಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿಯಿಲ್ಲದೆಯೇ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಸೋಲನ್ನಪ್ಪಿದ್ದು, ಜೆಡಿಎಸ್ ಜಯಶಾಲಿಯಾಗಿತ್ತು.

ಡಿಕೆಶಿ ರಾಜೀನಾಮೆ ನೀಡಲಿ: ತೇಜಸ್ವಿನಿ ಆಗ್ರಹ ಸುದ್ದಿಗೆ ಕ್ಲಿಕ್ ಮಾಡಿ.
ಸಂಬಂಧಿತ ಮಾಹಿತಿ ಹುಡುಕಿ