ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಒಂದೇ ಒಂದು ಸಾರಿ ಎಂದ ಪ್ರವೀಣ್ (Praveen | Akash | Onde Ondu Saari | Mungaru Male)
ಸುದ್ದಿ/ಗಾಸಿಪ್
Feedback Print Bookmark and Share
 
ಸಿನಿಮಾ ಹಿಟ್ ಆಗುವುದೇ ತಡ, ಅದರ ಹಾಡಿನ ಪ್ರತಿ ಸಾಲುಗಳೂ ಸಿನಿಮಾ ಆಗುತ್ತದೆ. ಅದಕ್ಕೆ ಮುಂಗಾರು ಮಳೆ ಚಿತ್ರವೇ ಉದಾಹರಣೆ. ಈ ಚಿತ್ರದ ಹಲವು ಸಾಲುಗಳು ಇದೀಗ ಚಿತ್ರಗಳಾಗಿವೆ. ಒಲವೇ ವಿಸ್ಮಯದ ಬಳಿಕ ಇದೀಗ ಒಂದೇ ಒಂದು ಸಾರಿ ಚಿತ್ರವಾಗಿದೆ.

ಕವಿರಾಜ್ ಬರೆದಿರುವ ಒಂದೇ ಒಂದು ಸಾರಿ, ಕಣ್ಮುಂದೆ ಬಾರೆ ಹಾಡಿನ ಮೊದಲ ಸಾಲನ್ನು ಸಿನಿಮಾ ಮಾಡಿರುವುದು ನಿರ್ದೇಶಕ ಪ್ರವೀಣ್ ತೊಕ್ಕಟ್ಟು. ಚಿತ್ರಕ್ಕೂ ಗಣೇಶ್‌ಗೂ ಯಾವುದೇ ಸಂಬಂಧವಿಲ್ಲ. ಆದರೆ ಚಿತ್ರದಲ್ಲಿ ಅವರನ್ನೇ ಹೋಲುವ ಹೊಸ ಹುಡುಗ ಆಕಾಶ್ ಇಲ್ಲಿ ನಾಯಕರಾಗಿದ್ದಾರೆ. ಈ ಮೊದಲು ಕಡಲ್ಮಗೆ ಎಂಬ ತುಳು ಸಿನಿಮಾ ಮಾಡಿದ್ದರು ಪ್ರವೀಣ್.

ಹೊಸ ಚಿತ್ರಕ್ಕೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಕೂಡ ಪ್ರವೀಣ್ ಅವರದ್ದೇ. ಚಿತ್ರಕ್ಕೆ ಶ್ವೇತಾ ರಾವ್ ನಾಯಕಿ. ಜತೆಗೆ ರಮೇಶ್ ಎಂಬ ಹೊಸ ಹುಡುಗ ಕೂಡ ಇದ್ದಾನೆ. ಕಿಶೋರ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಗ್ರೀನ್ಹೌಸ್ನಲ್ಲಿ ನಡೆಯಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರವೀಣ್, ಆಕಾಶ್, ಒಂದೇ ಒಂದು ಸಾರಿ, ಮುಂಗಾರು ಮಳೆ