ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿಟ್ಟಿಯ ಭಾಗ್ಯದ ಬಾಗಿಲು (Shrinagar Kitti | Sanju Weds Geetha | Ramya | Savaari)
ಸುದ್ದಿ/ಗಾಸಿಪ್
Feedback Print Bookmark and Share
 
Shrinagar Kitti
MOKSHA
ಶ್ರೀನಗರ ಕಿಟ್ಟಿಗೀಗ ಅದೃಷ್ಟ ಖುಲಾಯಿಸಿದೆ. 2010ರವರೆಗೂ ಅವರಿಗೆ ಕೈ ತುಂಬಾ ಕೆಲಸವಿದೆ. ಪ್ರಸ್ತುತ ಕಿಟ್ಟ ಐದಾರು ಚಿತ್ರಗಳಿಗೆ ಸಹಿ ಹಾಕಿದ್ದಾರೆ.

ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾದಲ್ಲಿ ಕಿಟ್ಟಿ ನಾಯಕ. ರಮ್ಯಾ ನಾಯಕಿ. ಉಳಿದ ತಂತ್ರಜ್ಞರ ಆಯ್ಕೆ ಇನ್ನು ನಡೆಯಬೇಕಿದೆ. ಇನ್ನು ಎಂ.ಕೆ. ಮಠ ನಿರ್ದೇಶನದ 'ಮರಳಿ ಮರೆಯಾಗಿ' ಚಿತ್ರ ಈಗಾಗಲೇ ಬ್ಯಾಂಕಾಕಿಗೆ ಶೂಟಿಂಗ್ ಮುಗಿಸಿ ಬರಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಸ್ವಲ್ಪ ಮುಂದಕ್ಕೆ ಹೋಗಿದೆ ಎನ್ನುತ್ತಾರೆ ಕಿಟ್ಟಿ. ಇಷ್ಟೇ ಅಲ್ಲ, ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಅದು ಸದ್ಯಕ್ಕಲ್ಲ. ಚಿತ್ರದ ಕತೆ ಇನ್ನು ಅಂತಿಮಗೊಂಡಿಲ್ಲ. ಚಿತ್ರೀಕರಣಕ್ಕೆ ಇನ್ನು ಒಂದು ವರ್ಷವಾದರೂ ಬೇಕು. ಯಾಕೆಂದರೆ, ಅದಕ್ಕೂ ಮೊದಲು ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರವೊಂದನ್ನು ಮಾಡಲಿದ್ದಾರೆ ಸೂರಿ.

ಈಗಾಗಲೇ ಸವಾರಿ ಯಶಸ್ಸಿನ ಖುಷಿಯಲ್ಲಿರುವ ಶ್ರೀನಗರ ಈಗ ಕಿಟ್ಟಿ ಮಳೆ ಬರಲಿ ಮಂಜೂ ಬರಲಿ ಚಿತ್ರದ ಪ್ರಚಾರಕ್ಕಾಗಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ ಅಂತೆಲ್ಲಾ ಸುತ್ತಿ ಬಂದಿದ್ದಾರೆ. ಇನ್ನೊಂದು ವಿಷಯ, ಇದುವರೆಗೆ ಶ್ರೀನಗರ ಕಿಟ್ಟಿ ಸುಮಾರು 50ಕ್ಕೂ ಹೆಚ್ಚು ಕತೆಗಳನ್ನು ಕೇಳಿದ್ದಾರಂತೆ. ಆದರೆ ಇದರಲ್ಲಿ ಕಿಟ್ಟಿ ಆಯ್ದುಕೊಂಡಿರುವುದು ಬೆರಳೆಣಿಕೆಯ ಚಿತ್ರ ಮಾತ್ರ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರೀನಗರ ಕಿಟ್ಟಿ, ಸಂಜು ವೆಡ್ಸ್ ಗೀತಾ, ರಮ್ಯ, ಸವಾರಿ, ಮರಳಿ ಮರೆಯಾಗಿ