ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪೂಜಾ ಗಾಂಧಿ-ಅಜಿತ್‌ಗೆ ಶೀಘ್ರಮೇವ 'ಕಲ್ಯಾಣಮಸ್ತು'! (Pooja Gandhi | Kalyanamastu | Patre Ajith | BN Mallesh)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಪೂಜಾ ಗಾಂಧಿ ಕನ್ನಡದ ಹುಡುಗನನ್ನು ಹುಡುಕುತ್ತಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಈಗ ಮದುವೆಯಾಗಲು ಹೊರಟರೇ ಎಂದು ಮೂಗಿನ ಮೇಲೆ ಬೆರಳಿಡಬೇಕಾಗಿಲ್ಲ. ಎಂದಿನಂತೆ ಇದು ಸಿನಿಮಾ ಸುದ್ದಿ. ಅವರು ನಟಿಸುತ್ತಿರುವ ಚಿತ್ರದ ಹೆಸರೇ 'ಕಲ್ಯಾಣಮಸ್ತು'!

'ಮುಂಗಾರು ಮಳೆ' ಗಾಂಧಿಗೆ 2010ರ ವರ್ಷ ಅಷ್ಟೇನೂ ಫಲಪ್ರದವಾಗಿಲ್ಲ. ಆಕೆ ಅಭಿನಯಿಸಿದ ಸಾಲು ಸಾಲು ಚಿತ್ರಗಳು ಮೂಲೆ ಗುಂಪಾಗಿವೆ. ಇತ್ತೀಚೆಗೆ ಬಿಡುಗಡೆಯಾದ 'ನೀ ರಾಣಿ, ನಾ ಮಹಾರಾಣಿ' ಕೂಡ ಸೊರಗಿದೆ. ಇವೆಲ್ಲದರ ನಡುವೆ ಆಕೆ ಪ್ರಸಿದ್ಧಿಯಲ್ಲಿರುವುದು ಜಾಹೀರಾತು ಪ್ರಪಂಚದಲ್ಲಿ. ಆ ಮೂಲಕ ಡಿಮ್ಯಾಂಡ್ ಉಳಿಸಿಕೊಂಡಿದ್ದಾರೆ.

ಅವರು ತುಳು ಚಿತ್ರ 'ಬೀರೆ ದೇವಪೂಂಜೆ' ಚಿತ್ರದಲ್ಲಿ ರಾಜನರ್ತಕಿಯಾಗಿ ಅಭಿನಯಿಸಿ ವಾಪಸ್ ಬರುತ್ತಿದ್ದಂತೆ ಈಗ 'ಕಲ್ಯಾಣಮಸ್ತು' ಎನ್ನುತ್ತಿದ್ದಾರೆ. ಕಾಂತರಾಜ್ ಮತ್ತು ರಾಜಶೇಖರ್ ಇದರ ನಿರ್ಮಾಪಕರು.

ಗಾಂಧಿನಗರದಲ್ಲಿ 'ಪಟ್ರೆ'ಯಾಗಿ ಕಾಣಿಸಿಕೊಂಡಿದ್ದ ಅಜಿತ್ 'ಗುಬ್ಬಿ' ಈ ಚಿತ್ರದ ನಾಯಕ. ಇಬ್ಬರು ನಾಯಕರು ಹಾಗೂ ಇಬ್ಬರು ನಾಯಕಿಯರು ಇಲ್ಲಿದ್ದಾರೆ. ಮತ್ತೊಬ್ಬ ನಾಯಕ ರವಿ ಎಂಬ ಹೊಸ ಮುಖ. ಇನ್ನೊಬ್ಬ ನಾಯಕಿಯ ಹುಡುಕಾಟ ನಡೀತಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಬಿ.ಎನ್. ಮಲ್ಲೇಶ್.

'ಕಲ್ಯಾಣಮಸ್ತು' ಹೆಸರೇ ಹೇಳುವಂತೆ ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ಕಾಲೇಜ್ ಕ್ಯಾಂಪಸ್ ಸುತ್ತ ನಡೆಯುವ ಕಥೆಯಲ್ಲಿ ಪ್ರೀತಿ, ಪ್ರೇಮ ಎಲ್ಲವೂ ಇದೆ. ಇದರೊಂದಿಗೆ ತಾಯಿ, ತಂಗಿ ಫ್ಯಾಮಿಲಿ ಸೆಂಟಿಮೆಂಟ್ ಸಹ ಇದೆ. ಇಲ್ಲಿ ಅಜಿತ್ ಕಾಲೇಜ್ ವಿದ್ಯಾರ್ಥಿ, ಜತೆಗೆ ಹಾಡುಗಾರನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚೆನ್ನೈ ಮೂಲಕ ಭರತ್ ಚಿತ್ರದ ಐದು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಇದು ಇವರಿಗೆ ಕನ್ನಡದ ಮೊದಲ ಚಿತ್ರ. ಸಿದ್ದಾರ್ಥ್ ಛಾಯಾಗ್ರಹಣ. ನಾಳೆ(ಡಿ.24)ಯಿಂದ ಬೆಂಗಳೂರು, ರಾಮನಗರ ಸುತ್ತಮುತ್ತ ಚಿತ್ರೀಕರಣ ಶುರುವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೂಜಾ ಗಾಂಧಿ, ಅಜಿತ್, ಕಲ್ಯಾಣಮಸ್ತು, ಬಿಎನ್ ಮಲ್ಲೇಶ್, ಕಾಂತರಾಜ್, ರಾಜಶೇಖರ್