ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರವಿ ಶ್ರೀವತ್ಸ ನಿರ್ದೇಶನದಲ್ಲಿ ಹೊಸ ಚಿತ್ರಕ್ಕೆ ಶಿವಣ್ಣ (Ravi Srivatsa | Shivaraj Kumar | Devaraj | Ajay Rao)
ಸುದ್ದಿ/ಗಾಸಿಪ್
Bookmark and Share Feedback Print
 
'ಮೈಲಾರಿ' ಈಗಷ್ಟೇ ತೆರೆಕಂಡು ಎಲ್ಲೆಡೆ ಸಕ್ಸಸ್ ಮಂತ್ರ ಜಪಿಸುತ್ತಿರುವಾಗಲೇ ಶಿವರಾಜ್ ಕುಮಾರ್ ಮತ್ತೊಂದು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಸಿನಿಮಾ ರವಿ ಶ್ರೀವತ್ಸ ನಿರ್ದೇಶನದ್ದು ಎನ್ನುವುದು ಎಲ್ಲರಿಗೂ ತಿಳಿದದ್ದೇ.

ಹೊಸ ಸಂಗತಿ ಏನೆಂದರೆ, ಇನ್ನೂ ಹೆಸರಿಡದ ಈ ಚಿತ್ರಕ್ಕೆ ಮತ್ತಿಬ್ಬರು ನಟರು ಸೇರ್ಪಡೆಯಾಗಿರುವುದು. ಅವರು ಅಜಯ್ ರಾವ್ ಮತ್ತು ದೇವರಾಜ್. ಒಂದು ರೀತಿಯಲ್ಲಿ ಹ್ಯಾಟ್ರಿಕ್ ಹೀರೋ ಜೊತೆ ಹ್ಯಾಟ್ರಿಕ್ ಹೀರೋಸ್!

ಮೂರು ಮಂದಿ ಸೇರಿದ ಮೇಲೆ ಚಿತ್ರದಲ್ಲಿ ಸಮ್ತಿಂಗ್ ಸ್ಪೆಷಲ್ ಇರಬಹುದೆಂಬ ಕುತೂಹಲ ಪ್ರೇಕ್ಷಕರಲ್ಲಿ ಸಹಜ. ಶ್ರೀವತ್ಸ ಪ್ರಕಾರ ಈ ಚಿತ್ರದ ಕಥೆಗೆ ಮೂವರು ಬೇಕಾಗಿತ್ತು. ಹಾಗಾಗಿ ಮತ್ತಿಬ್ಬರನ್ನು ಸೇರಿಸಲಾಗಿದೆ.

ಡೈನಾಮಿಕ್ ದೇವರಾಜ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ತಮ್ಮ ಮಾಮೂಲಿ ಖಾಕಿ ಖದರ್ ತೋರಿಸಲಿದ್ದಾರೆ. ಚಿತ್ರದಲ್ಲಿ ಸೆಂಟಿಮೆಂಟ್, ಆಕ್ಷನ್ ಎಲ್ಲವೂ ಇದೆ. ಇಲ್ಲಿ ಮೂರು ಪಾತ್ರಗಳಿಗೂ ಒಂದಕ್ಕೊಂದು ಸಂಬಂಧವಿರುತ್ತದೆ ಎಂದಿದ್ದಾರೆ ಶ್ರೀವತ್ಸ.

ಹಿಂದೆ ರವಿಶ್ರೀವತ್ಸ ಶಿವಣ್ಣನ 'ಮಾದೇಶ' ಚಿತ್ರ ಮಾಡಿದ್ದರು. ಅದು ಪಕ್ಕಾ ಆಕ್ಷನ್ ಚಿತ್ರ. ಈ ಹೊಸ ಚಿತ್ರದ ಶೀರ್ಷಿಕೆಗಾಗಿ ಶೋಧ ನಡೆಯುತ್ತಿದೆ.

ಸೂರಪ್ಪ ಇದರ ನಿರ್ಮಾಪಕರು, ಅರ್ಜುನ್ ಸಂಗೀತ ಹಾಗೂ ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ನಾಯಕಿ ಹಾಗೂ ಇತರ ತಾರಾಬಳಗದ ಆಯ್ಕೆ ಪ್ರಕ್ರಿಯೆ ಕೂಡ ಇನ್ನಷ್ಟೇ ನಡೆಯಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರವಿ ಶ್ರೀವತ್ಸ, ಶಿವರಾಜ್ ಕುಮಾರ್, ದೇವರಾಜ್, ಅಜಯ್ ರಾವ್