ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಕೆಂಪೇಗೌಡ' ಟ್ರೋಫಿ ಬಗಲಿಗೇರಿಸಿಕೊಂಡ 'ಕೆಂಪೇಗೌಡ' (Kempe Gowda cup | Sudeep | Pradeep | Shankare Gowda)
PR
ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲೂ 'ಕೆಂಪೇಗೌಡ' ಜಯಭೇರಿ ಭಾರಿಸಿದೆ. ಸುದೀಪ್ ನಿರ್ದೇಶಿಸಿ ನಾಯಕನಾಗಿ ನಟಿಸಿರುವ 'ಕೆಂಪೇಗೌಡ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಜಯಭೇರಿ ಭಾರಿಸಿರುವ ನಿಮಿತ್ತ ಆಯೋಜಿಸಲಾಗಿದ್ದ ಇಪ್ಪತ್ತು ಒವರುಗಳ ಪಂದ್ಯದಲ್ಲಿ ಸುದೀಪ್ ನಾಯಕತ್ವದ 'ಕೆಂಪೇಗೌಡ' ತಂಡ 'ಪ್ರೆಸ್‌ ಕ್ಲಬ್ ಬೆಂಗಳೂರು' ತಂಡವನ್ನು ಎಂಟು ವಿಕೆಟುಗಳಿಂದ ಮಣಿಸಿ 'ಕೆಂಪೇಗೌಡ' ಕಪ್‌ನ್ನು ಮಡಿಲಿಗೇರಿಸಿಕೊಂಡಿದೆ.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಮೈದಾನದಲ್ಲಿ ಭಾನುವಾರ ನಡೆದ ಈ ಪಂದ್ಯದ ಟ್ರೋಫಿಯನ್ನು ಕಾಟನ್ ಪೇಟೆ ಎಸಿಪಿ ಲೋಕೇಶ್ವರ್ ಅವರು 'ಕೆಂಪೇಗೌಡ' ಚಿತ್ರದ ನಿರ್ಮಾಪಕ ಶಂಕರೇ ಗೌಡ ಅವರಿಗೆ ನೀಡಿದರು.

ಮೊದಲು ಬ್ಯಾಟಿಂಗ್ ನಡೆಸಿದ್ದ ಮಹದೇವ್ ನಾಯಕತ್ವದ ಪ್ರೆಸ್ ಕ್ಲಬ್ ತಂಡ 126 ರನ್‌ ಗಳಿಸಿತ್ತು. ನಂತರ ರನ್ ಬೆಂಬತ್ತಿದ ಕೆಂಪೇಗೌಡ ತಂಡ ಎರಡು ವಿಕೆಟುಗಳ ನಷ್ಟದೊಂದಿಗೆ ಗುರಿ ತಲುಪಿತು. ನಾಯಕ ಸುದೀಪ್ ಮತ್ತು ಪ್ರದೀಪ್ ಅಜೇಯರಾಗುಳಿದರು. ಈ ಹಿಂದೆ 'ನಾಗರ ಹಾವು' ಮತ್ತು 'ಕದಂಬ' ಚಿತ್ರದ ಹೆಸರಿನಲ್ಲೂ ಇಂತಹ ಕ್ರಿಕೆಟ್ ಪಂದ್ಯವನ್ನು ಏರ್ಪಡಿಸಲಾಗಿತ್ತು.
ಇವನ್ನೂ ಓದಿ