ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ವರದಪ್ಪ ನಾಯಕನಾಗಿ ಸುದೀಪ್ (Sudeep | Varadappa Nayaka | Annaiah | Kempe Gowda)
PR
'ವೀರ ಮದಕರಿ', 'ಕೆಂಪೇಗೌಡ' ನಂತರ ಈಗ 'ವರದಪ್ಪ ನಾಯಕ'ನಾಗಲು ಹೊರಟಿದ್ದಾರೆ ನಟ-ನಿರ್ದೇಶಕ ಸುದೀಪ್.

'ವೀರ ಮದಕರಿ' ನಂತರ 'ಕೆಂಪೇಗೌಡ'ನಾದ ಸುದೀಪ್ ಮತ್ತೆ ಚಾರಿತ್ರಿಕ ಹಿನ್ನೆಲೆ ಇರುವ ವರದಪ್ಪ ನಾಯಕನ ಮೊರೆ ಹೋಗಿದ್ದಾರೆ. 'ವರದಪ್ಪ ನಾಯಕ' ಶೀರ್ಷಿಕೆ ಪಕ್ಕಾ ಆಗಿಲ್ಲ. ಆದರೆ ಇದೇ ಹೆಸರು ಅಂತಿಮವಾದರೂ ಆಶ್ಚರ್ಯವಿಲ್ಲ.

ತೆಲುಗಿನ 'ಲಕ್ಷ್ಯಂ' ಚಿತ್ರವನ್ನು 'ವರದಪ್ಪ ನಾಯಕ'ನ ಹೆಸರಲ್ಲಿ ಭಟ್ಟಿ ಇಳಿಸಲು ಸುದೀಪ್ ತಯಾರಾಗಿದ್ದಾರೆ. ಆದರೆ ಈ ಸಾರಿ ಅವರ ಪ್ರತಿಭೆ ನಟನೆಗೆ ಮಾತ್ರ ಮೀಸಲು. ನಿರ್ದೇಶನದ ಜವಾಬ್ದಾರಿಯನ್ನು ಅವರು 'ಅಣ್ಣಯ್ಯ' ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಅಣ್ಣಯ್ಯ ನಿರ್ದೇಶಿಸಿರುವ ಮಾಲಾಶ್ರೀ ಅಭಿನಯದ 'ವೀರ' ಇನ್ನಷ್ಟೇ ತೆರೆ ಕಾಣಬೇಕಿದೆ.

'ಕೆಂಪೇಗೌಡ' ಚಿತ್ರದಲ್ಲಿದ್ದ ತಾಂತ್ರಿಕ ವರ್ಗ ಹಾಗೂ ಕಲಾವಿದರು 'ವರದಪ್ಪ ನಾಯಕ'ದಲ್ಲೂ ಇದ್ದಾರೆ. 'ಕೆಂಪೇಗೌಡ' ಚಿತ್ರದ ಯಶಸ್ಸಿನ ಗೆಟಪ್‌ನಲ್ಲಿ ಈ ಚಿತ್ರದ ತಂಡ ಮಿಂಚಲು ಸಿದ್ಧತೆ ನಡೆಸಿದೆ.

ರವಿ ಛಾಯಾಗ್ರಹಣ, ಕೃಷ್ಣ ಸಂಗೀತ ಈ ಚಿತ್ರಕ್ಕಿದೆ. 'ಕೆಂಪೇಗೌಡ' ಖ್ಯಾತಿಯ ಶಂಕರೇ ಗೌಡರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಾರಾ ಬಳಗದ ಆಯ್ಕೆ ಪ್ರಗತಿಯಲ್ಲಿದೆ. ಏಪ್ರಿಲ್ ಮಧ್ಯ ಭಾಗದಿಂದ 'ವರದಪ್ಪ ನಾಯಕ'ನ ಚಿತ್ರೀಕರಣ ಆರಂಭಗೊಳ್ಳಲಿದೆ.
ಇವನ್ನೂ ಓದಿ