ಪ್ರಣಯದ ಗುಲ್ಲು:ವೈಜಯಂತಿ ಬೇಸರ
ನವದೆಹಲಿ, ಮಂಗಳವಾರ, 11 ಸೆಪ್ಟೆಂಬರ್ 2007( 19:06 IST )
ಹಿಂದಿ ಚಿತ್ರರಂಗದ ಹಿರಿಯ ನಟ ರಾಜಕಪೂರ್ ಜತೆ ತಮ್ಮ ಪ್ರಣಯದ ಗುಲ್ಲು ಹಬ್ಬಿದ್ದರಿಂದ ತೀವ್ರ ಬೇಸರವಾಯಿತೆಂದು ಹಿರಿಯ ನಟಿ ವೈಜಯಂತಿ ಮಾಲಾ ಹೇಳಿದ್ದಾರೆ.
ಶೋಮ್ಯಾನ್ ರಾಜಕಪೂರ್ ತರುವಾಯ ಸಿಕ್ಕಿದ ಪ್ರಚಾರದಿಂದ ಖುಷಿಪಟ್ಟರು. ಆದರೆ ಮಾಧ್ಯಮ ನನ್ನ ಅಭಿಪ್ರಾಯ ಕೇಳಲೇ ಇಲ್ಲ ಎಂದು ಅವರು ಗತಜೀವನದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ಆರ್ಕೆ ಬ್ಯಾನರ್ನ ಕೈಚಳಕದಿಂದ ಇವೆಲ್ಲಾ ನಡೆದಿದೆ. ಅನವಶ್ಯಕವಾಗಿ ಈ ಅಸಂಬದ್ಧ ವದಂತಿ ಕಾಳ್ಗಿಚ್ಚಿನಂತೆ ಹರಡಿತು ಎಂದು "ಬಾಂಡಿಂಗ್ ಎ ಮೆಮೈರ್" ಜೀವನಚರಿತ್ರೆಯಲ್ಲಿ ಅವರು ಹೇಳಿಕೊಂಡಿದ್ದಾರೆ.
ನನ್ನ ದೃಷ್ಟಿಕೋನ ಏನೆಂದು ಅರಿಯಲು ಮಾಧ್ಯಮದ ಯಾರೂ ಚಿಂತಿಸಲಿಲ್ಲ. ಇದು ಖಂಡಿತ ನಿರಾಧಾರ ಮತ್ತು ನನಗೆ ಕೋಪವನ್ನೂ ತರಿಸಿತು ಎಂದು ವೈಜಯಂತಿಮಾಲಾ ಬರೆದಿದ್ದಾರೆ.
ಇನ್ನೊಂದು ಪ್ರಸಂಗವನ್ನು ನೆನಪಿಸಿಕೊಂಡ ಅವರು "ಚಿತ್ರದ ಪ್ರಚಾರಕ್ಕೆ ಸಂಬಂಧಿಸಿದಂತೆ ಆರ್ಕೆ ಸ್ವಾರ್ಥಿಯಾಗಿದ್ದರು. ಉತ್ಪ್ರೇಕ್ಷೆಯನ್ನು ಸಮರ್ಥಿಸಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಿದ್ದರು.
ಮೈಸೂರಿನ ಮಹಾರಾಜರಿಗೆ ನಾನು ಯಾವುದೋ ರೀತಿಯಲ್ಲಿ ಸಂಬಂಧಿ ಎಂದು ಕೂಡ ಆರ್ಕೆ ಬ್ಯಾಂಡ್ವಾಗನ್ ಸುದ್ದಿಹಬ್ಬಿಸಿತ್ತು. ಎಂತಹ ಅಸಂಬದ್ಧ." ಲೇಡಿಸ್ ಮ್ಯಾನ್ ಎಂಬ ಆರ್ಕೆ ಖ್ಯಾತಿಯ ಬಗ್ಗೆ ಮಾತನಾಡುತ್ತಾ, ಅದು ಕೂಡ ಅವರ ಪ್ರಚಾರ ಸ್ಟಂಟ್ನ ಫಲ.
ಸಂಗಮ್ ಚಿತ್ರವನ್ನು ನಿರ್ಮಿಸುವ ನಾಲ್ಕು ವರ್ಷಗಳಲ್ಲಿ ನಾನು ಆರ್ಕೆಯನ್ನು ಗಮನಿಸಿದಾಗ ಅವರಿಗೆ ಮಹಿಳೆಯರ ಗೀಳು ಇಲ್ಲವೆಂಬುದನ್ನು ಗಮನಿಸಿದ್ದಾಗಿ ವೈಜಯಂತಿಮಾಲಾ ಹೇಳಿದ್ದಾರೆ.