ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹತ್ಯೆಗೆ ಮುಂಚೆ ಪ್ರಭಾಕರನ್‌ಗೆ ಚಿತ್ರಹಿಂಸೆ ನೀಡಲಾಯಿತೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹತ್ಯೆಗೆ ಮುಂಚೆ ಪ್ರಭಾಕರನ್‌ಗೆ ಚಿತ್ರಹಿಂಸೆ ನೀಡಲಾಯಿತೆ?
ತಮಿಳು ವ್ಯಾಘ್ರಗಳ ನಾಯಕ ವೇಲುಪಿಳ್ಳೈ ಪ್ರಭಾಕರನ್‌ನನ್ನು ಕೊಲ್ಲುವುದಕ್ಕೆ ಮುಂಚಿತವಾಗಿ ಶ್ರೀಲಂಕಾ ಮಿಲಿಟರಿ ಚಿತ್ರಹಿಂಸೆ ನೀಡಿದೆಯೆಂದು ಮಾನವ ಹಕ್ಕು ರಕ್ಷಣೆಯ ಪ್ರಮುಖ ಸಂಘಟನೆಯೊಂದು ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ತಮಿಳು ಸರ್ಕಾರದ ರಾಜಕಾರಣಿ ಮತ್ತು ಜನರಲ್‌ವೊಬ್ಬರ ಸಮ್ಮುಖದಲ್ಲೇ ಪ್ರಭಾಕರನ್‌ಗೆ ಚಿತ್ರಹಿಂಸೆ ನೀಡಲಾಯಿತೆಂದು ಉನ್ನತ ಮಟ್ಟದ ಮಿಲಿಟರಿ ಮ‌ೂಲಗಳನ್ನು ಉಲ್ಲೇಖಿಸಿ ವಿವಿ ಉಪನ್ಯಾಸಕರ ಮಾನವ ಹಕ್ಕು ಸಂಘಟನೆ ತಿಳಿಸಿದೆ.

ಎಲ್ಟಿಟಿಇ ಜತೆ ಹೋರಾಡಿದ ಸೇನೆಯ 53ನೇ ವಿಭಾಗದ ಮುಖ್ಯಕೇಂದ್ರದಲ್ಲಿ ಬಹುಶಃ ಚಿತ್ರಹಿಂಸೆ ನೀಡಿರಬಹುದೆಂದು ಹೇಳಲಾಗಿದೆ.ಪ್ರಭಾಕರನ್‌ನ 12 ವರ್ಷ ವಯಸ್ಸಿನ ಕಿರಿಯ ಪುತ್ರ ಬಾಲಚಂದ್ರನ್‌ನನ್ನು ಸೆರೆಹಿಡಿದ ಬಳಿಕ ಕೊಲ್ಲಲಾಗಿದೆಯೆಂದು ಹಲವಾರು ಸೇನೆಯ ಮ‌ೂಲಗಳು ತಿಳಿಸಿವೆ. ಅವನನ್ನು ತಂದೆಯ ಸಮ್ಮುಖದಲ್ಲೇ ಹತ್ಯೆಮಾಡಲಾಯಿತೆಂದು ಮ‌ೂಲಗಳು ಹೇಳಿದ್ದಾಗಿ ಮಾನವ ಹಕ್ಕು ರಕ್ಷಣೆ ಸಂಘಟನೆ ತಿಳಿಸಿದೆ.

ಮಿಲಿಟರಿ ಮತ್ತು ಎಲ್‌ಟಿಟಿಇಯ ಅತಿರೇಕಗಳ ಬಗ್ಗೆ ಸಂಘಟನೆ ತೀವ್ರ ಟೀಕಾಪ್ರಹಾರ ಮಾಡಿದೆ. ಗುಂಡು ಹಾರಾಟ ನಿಷೇಧ ಪ್ರದೇಶದಲ್ಲಿದ್ದ ಎಲ್ಲ ಎಲ್‌ಟಿಟಿಇ ಉಗ್ರರನ್ನು ಕಗ್ಗೊಲೆ ಮಾಡಲಾಗಿದೆಯೆಂದು 48 ಪುಟಗಳ ವರದಿಯಲ್ಲಿ ತಿಳಿಸಿದ್ದು, ಇದರ ಪ್ರತಿಯನ್ನು ಐಎಎನ್‌ಎಸ್‌ಗೆ ಕಳಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ ಸರ್ಕಾರಕ್ಕೆ ಅಮೆರಿಕ ಅಧ್ಯಕ್ಷರ ಖಾಸಗಿ ಪತ್ರ
ವಿಶ್ವಸಂಸ್ಥೆಯ ಇಬ್ಬರು ಸಿಬ್ಬಂದಿ ಪೇಶಾವರ ಸ್ಫೋಟಕ್ಕೆ ಬಲಿ
ಇರಾಕ್: ಕಾರು ಬಾಂಬ್ ಸ್ಫೋಟಕ್ಕೆ 19 ಬಲಿ
73 ರಾಷ್ಟ್ರಗಳಿಗೆ ವ್ಯಾಪಿಸಿದ ಹಂದಿಜ್ವರ
ಭಾರತದೊಂದಿಗೆ ಮತ್ತೆ ಯುದ್ಧ ಬೇಕಾಗಿಲ್ಲ: ಪಾಕ್
ವಿಶ್ವಸಂಸ್ಥೆ ಆಯೋಗದಿಂದ ಬೇನಜೀರ್ ಹತ್ಯೆ ತನಿಖೆ