ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೆ ನಂದಿಸಲು ಸೋನಿಯಾ ಕಾರಣ ಅಲ್ಲ: ಮೊಯಿಲಿ
ಎಐಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಮಾತು ಬದಲಿಸಿದ್ದಾರೆ. ಹೊಗೇನಕಲ್ ಯೋಜನೆಯನ್ನು ತಡೆಹಿಡಿದದ್ದು ಕರುಣಾನಿಧಿಯೇ ಹೊರತು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿ ಮಂಗಳವಾರ ತಾವು ನೀಡಿದ ಹೇಳಿಕೆಗೆ ವ್ಯತಿರಿಕ್ತವಾಗಿ ಮೊಯಿಲಿ, ಹೊಗೇನಕಲ್ ಯೋಜನೆ ತಡೆಹಿಡಿಯಲು ಸೋನಿಯಾ ಅವರು ಕರುಣಾನಿಧಿ ಜತೆಗೆ ಖಾಸಗಿ ಮಾತುಕತೆ ನಡೆಸಿದ್ದರು ಎಂಬ ಭಾವನೆ ಮೂಡಿಸಲಾಗಿದೆ ಎಂದು ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಯೋಜನೆ ಸ್ಥಗಿತಕ್ಕೆ ಸೋನಿಯಾ ಅವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯನ್ನು ಕೋರಿದ್ದರು ಎಂದು ಮೊಯಿಲಿ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಇಂದು ಸ್ಪಷ್ಟನೆ ನೀಡಿರುವ ಮೊಯಿಲಿ, ಕರ್ನಾಟಕದಲ್ಲಿ ಯಾವುದೇ ಚುನಾಯಿತ ಸರಕಾರ ಇಲ್ಲ ಎಂಬುದನ್ನು ಮನಗಂಡು ಇದು ಕರುಣಾನಿಧಿಯವರೇ ತೆಗೆದುಕೊಂಡ ನಿರ್ಧಾರ ಎಂದು ಹೇಳಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡು ನಡುವಣ ಈ ವಿವಾದಕ್ಕೆ ಸಹಮತದ ಪರಿಹಾರ ದೊರೆಯಬೇಕೆಂಬುದು ಸೋನಿಯಾ ಆಶಯ. ಉಭಯ ರಾಜ್ಯಗಳ ಜನರ ಮಧ್ಯೆ ಸೌಹಾರ್ದಯುತ ಮತ್ತು ಶಾಂತಿಯುತ ಸಂಬಂಧದ ಬಗ್ಗೆ ಅವರು ಕಾಳಜಿ ಹೊಂದಿದ್ದಾರೆ ಎಂದು ಮೊಯಿಲಿ ನುಡಿದರು.
ಮತ್ತಷ್ಟು
ಭೃಷ್ಟನ ಪತ್ನಿಯೂ ತಪ್ಪಿತಸ್ಥಳೇ: ಕೋರ್ಟ್
ಸರಬ್ಜಿತ್‌ಗಾಗಿ ಕ್ಷಮೆ ಕೇಳುವೆ: ಬರ್ನೆ
ಹೈಕಮಾಂಡ್ ಕೈಯಲ್ಲಿ ದೇಶಮುಖ್ ಭವಿಷ್ಯ
ರಾಜ್ಯದಲ್ಲೂ ಸಿಖ್ಖರಿಗೆ 'ಅಲ್ಪಸಂಖ್ಯಾತರು' ಮಾನ್ಯತೆ
ಹೊಗೆ: ಕರುಣಾ ರಾಜೀನಾಮೆಗೆ ಜಯಾ ಆಗ್ರಹ
ಸಾಲದು ವೇತನ : ಸೇನೆಯಿಂದ ಅಧಿಕಾರಿಗಳ ನಿರ್ಗಮನ