ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚುನಾವಣೆ ಬಳಿಕ ಕಾಂಗ್ರೆಸ್‌‍‌ನೊಂದಿಗೆ ಮಾತಾಡಬಹುದು: ಕಾರಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆ ಬಳಿಕ ಕಾಂಗ್ರೆಸ್‌‍‌ನೊಂದಿಗೆ ಮಾತಾಡಬಹುದು: ಕಾರಟ್
ನವದೆಹಲಿ: ಮಹಾ ಚುನಾವಣೆಯ ಬಳಿಕ ಪರ್ಯಾಯ ಸರ್ಕಾರ ಒಂದನ್ನು ರೂಪಿಸಲು ಕಾಂಗ್ರೆಸ್ ಜತೆ ಮಾತುಕತೆ ನಡೆಸಲು ತಾನು ಮುಕ್ತವಾಗಿರುವುದಾಗಿ ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದಾರೆ.

"ನಾವು ಅವರೊಂದಿಗೆ ವ್ಯವಹರಿಸಬಹುದು. ಅಲ್ಲದೆ ಪರ್ಯಾಯ ಜಾತ್ಯತೀತ ಸರ್ಕಾರ ಒಂದನ್ನು ರೂಪಿಸಲು ಬೆಂಬಲಿಸುವಂತೆ ವಿನಂತಿಸಬಹುದು. ಇದು ಸಾಧ್ಯ. ಏಕೆ ಸಾಧ್ಯವಿಲ್ಲ? ಇದನ್ನು ನಾನು ತಳ್ಳಿಹಾಕಲಾರೆ" ಎಂಬುದಾಗಿ ಕಾರಟ್ ಅವರು ಖಾಸಗೀ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಮಿತ್ರಕೂಟಗಳಿಗೆ ಪರ್ಯಾಯವಾಗಿ ತೃತೀಯರಂಗವನ್ನು ಹುಟ್ಟುಹಾಕಲು ಪ್ರಮುಖ ಪಾತ್ರ ವಹಿಸಿದ್ದ ಕಾರಟ್ ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದೆ.

ಸರ್ಕಾರವು ಅಮೆರಿಕದೊಂದಿಗೆ ನಾಗರಿಕ ಅಣುಒಪ್ಪಂದ ಪ್ರಕ್ರಿಯೆಯಲ್ಲಿ ಮುಂದುವರಿಯುವುದನ್ನು ವಿರೋಧಿಸಿ ಎಡಪಕ್ಷಗಳು ಯುಪಿಎ ಮೈತ್ರಿಕೂಟದಿಂದ ಹೊರಬಂದಿದ್ದವು.

"ಇದು ಅಸ್ಪಶೃತೆಯ ಪ್ರಶ್ನೆಯಲ್ಲ. ನಾವು ಎಲ್ಲಾ ಪಕ್ಷದೊಂದಿಗೆ ವ್ಯವಹರಿಸಬಹುದು. ಆದರೆ, ಆ ವ್ಯವಹಾರವು ಜನಾದೇಶದ ಸ್ವರೂಪಕ್ಕೆ ಮಿತವಾಗಿದೆ" ಎಂದು ಕಾರಟ್ ಹೇಳಿದ್ದಾರೆ.

ಯುಪಿಎ ಸರ್ಕಾರವನ್ನು ಬೆಂಬಲಿಸಿದ್ದ ಹಲವು ಎಡಪಕ್ಷಗಳಲ್ಲಿ ಸಿಪಿಐ-ಎಂ ಅತಿ ದೊಡ್ಡ ಪಕ್ಷವಾಗಿತ್ತು. ಕಾರಟ್ ಅವರ ಹೇಳಿಕೆಯು, ಎಡಪಕ್ಷಗಳೂ ಇನ್ನೂ ಕಾಂಗ್ರೆಸ್‌ಗೆ ಬೆಂಬಲ ನೀಡಬಹುದು ಎಂಬ ಸೂಚನೆ ರವಾನಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದುರಂತ ತಪ್ಪಿಸಿಕೊಂಡ ರಾಜಧಾನಿ ಎಕ್ಸ್‌ಪ್ರೆಸ್
ಹಣವಂತನಾಗಲು ಹೆತ್ತ ಮಗಳಮೇಲೆ ಅತ್ಯಾಚಾರ!
ಪ್ರಧಾನಿ ಅಭ್ಯರ್ಥಿ: ಅಂತಿಮ ನಿಲುವೇನೆಂದು ಕೇಳಿದ ಕಾಂಗ್ರೆಸ್
ಅಡ್ವಾಣಿ ವಿರುದ್ಧ ಸ್ಫರ್ಧೆಗೆ ಮಲ್ಲಿಕಾ ಸಾರಾಭಾಯಿ
ಪಶ್ಚಿಮ ಬಂಗಾಲ: ಸೈಕಲ್‌ಬಾಂಬ್‌ ಸ್ಫೋಟಕ್ಕೆ ಎರಡು ಬಲಿ
ವರುಣ್ ಹೇಳಕೆ: ಬಿಜೆಪಿಯೊಳಗೆ ಎರಡು ಧ್ವನಿ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com