ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನ್ಯಾಯಾಧೀಶರಿಗೆ ಕಪಾಳ ಮೋಕ್ಷಮಾಡಿದ ವಕೀಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾಯಾಧೀಶರಿಗೆ ಕಪಾಳ ಮೋಕ್ಷಮಾಡಿದ ವಕೀಲ
ಕೋರ್ಟ್ ಕಲಾಪಕ್ಕೆ ಅಡ್ಡಿ ಪಡಿಸಬೇಡಿ ಎಂದು ಹೇಳಿದ ನ್ಯಾಯಾಧೀಶರಿಗೆ ವಕೀಲರು ಕಪಾಳಕ್ಕೆ ಬಿಗಿದ ಘಟನೆ ದೆಹಲಿಯ ವಿಚಾರಾಣಾಧೀನ ನ್ಯಾಯಾಲಯದಲ್ಲಿ ಬುಧವಾರ ಸಂಭವಿಸಿದೆ.

ನ್ಯಾಯಾಧೀಶ ಪಂಕಜ್ ಗುಪ್ತಾ ಅವರು ಹಿಂದೂ ವಿವಾಹ ಕಾಯ್ದೆ ಕುರಿತ ಪ್ರಕರಣ ಒಂದರ ವಿಚಾರಣೆ ನಡೆಸುತ್ತಿದ್ದ ವೇಳೆ ವಕೀಲರೊಬ್ಬರು ಕಲಾಪಕ್ಕೆ ಅಡ್ಡಿ ಪಡಿಸಿದರು. ಈ ವೇಳೆ ಕಲಾಪದಲ್ಲಿ ಮೂಗು ತೂರಿಸದಿರುವಂತೆ ನ್ಯಾಯಾಧೀಶರು ತಾಕೀತು ಮಾಡಿದರು.

ಇದರಿಂದ ವ್ಯಗ್ರಗೊಂಡ ವಕೀಲ ತಕ್ಷಣ ಹೊರ ನಡೆದು ಮತ್ತಷ್ಟು ವಕೀಲರ ಗುಂಪನ್ನು ಕರೆದುಕೊಂಡು ಬಂದಿದ್ದು, ನ್ಯಾಯಾಧೀಶರ ಕೆನ್ನೆಗೆ ಬಾರಿಸಿದರು. ಈ ಪ್ರಕರಣವನ್ನು ನ್ಯಾಯಾಂಗ ಅಧಿಕಾರಿಗಳು ಖಂಡಿಸಿದ್ದು, ತಮಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆದರೆ ವಕೀಲರ ಗುಂಪು ಮಾತ್ರ ತಾವು ಗುಪ್ತಾರಿಗೆ ಹೊಡೆದೇ ಇಲ್ಲ, ಆವರೊಂದಿಗೆ ಮಾತಿನ ಚಕಮಕಿ ನಡೆಯಿತು ಅಷ್ಟೆ ಎಂದು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಳ್ಳಭಟ್ಟಿ ದುರಂತಕ್ಕೆ 32 ಬಲಿ
ಕರಾವಳಿ ರಾಜ್ಯಗಳಿಗೆ ಶೀಘ್ರ ಐಡಿ ಕಾರ್ಡ್‌ಗಳು
ಫ್ರಾನ್ಸ್‌ನಲ್ಲಿ ಸಾವರ್ಕರ್ ಪ್ರತಿಮೆ ಸ್ಥಾಪನೆಗೆ ಒತ್ತಾಯ
ತಮಿಳುನಾಡಿನ ಈ ಭಿಕ್ಷಾಧಿಪತಿ 14 ಲಕ್ಷಾಧಿಪತಿ!
ಕಸಬ್‌ಗೆ ಜೈಲು ಬೋರ್, ಓದಲು ಪುಸ್ತಕ ಬೇಕಂತೆ
ನಕ್ಸಲರೊಂದಿಗೆ ನೇರ ಮಾತಕತೆ ಇಲ್ಲ: ಕೇಂದ್ರ