ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಠಾಕ್ರೆ ಯಮರಾಜನನ್ನು ಜಯಿಸಲಿ: ಬಚ್ಚನ್ ಹಾರೈಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಠಾಕ್ರೆ ಯಮರಾಜನನ್ನು ಜಯಿಸಲಿ: ಬಚ್ಚನ್ ಹಾರೈಕೆ
Amitabh Bachchan
PTI
ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರು ಯಮರಾಜನನ್ನು ಸೋಲಿಸಲಿ ಎಂದು ಬಿಗ್ ಬಿ ಅಮಿತಾಭ್ ಬಚ್ಚನ್ ಹಾರೈಸಿದ್ದಾರೆ. ತೀವ್ರ ಹೊಟ್ಟೆನೋವಿನಿಂದಾಗಿ ವೈದ್ಯರಿಂದ ಸಂಪೂರ್ಣ ವಿಶ್ರಾಂತಿಗೆ ಸಲಹೆ ಪಡೆದಿರುವ ಅಮಿತಾಭ್, ಕಳೆದ ವಾರ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬಾಳಾ ಠಾಕ್ರೆಯವರ ಆರೋಗ್ಯ ವಿಚಾರಿಸಿದ್ದರು.

Bal Thackeray
PTI
ಠಾಕ್ರೆ ಪುತ್ರ ಉದ್ಧವ್ ಅವರಿಂದ ಬಾಳಾ ಠಾಕ್ರೆ ಆರೋಗ್ಯ ವಿಚಾರಿಸುತ್ತಿರುವ ಬಚ್ಚನ್, "ಬಾಳಾ ಸಾಹೇಬ್ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಆರೋಗ್ಯವಂತರಾಗಿರಲಿ ಎಂದು ಹಾರೈಸುತ್ತೇನೆ" ಎಂಬುದಾಗಿ ಅಮಿತಾಭ್ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ.

1982ರಲ್ಲಿ ತಾವು ಮಾರಣಾಂತಿಕ ಅಪಘಾತವೊಂದರಲ್ಲಿ ಸಾವಿನ ಅಂಗಳಕ್ಕೆ ಹೋಗಿ ಬಂದ ಬಳಿಕ ಬಾಳಾ ಠಾಕ್ರೆ ರಚಿಸಿದ್ದ ವ್ಯಂಗ್ಯಚಿತ್ರಗಳನ್ನು ಅಮಿತಾಭ್ ನೆನಪಿಸಿಕೊಂಡಿದ್ದಾರೆ. ಈ ಕಾರ್ಟೂನಿನಲ್ಲಿ ಬಾಳಾ ಸಾಹೆಬ್ ಅವರು, ಯಮರಾಜ ತಾವಿದ್ದ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಬಂದಿದ್ದಾಗ, ಆತನ ವಿರುದ್ಧ ಯಶಸ್ವಿಯಾಗಿ ಸೆಣಸಾಡಿದ ಚಿತ್ರಣವುಳ್ಳ ಕಾರ್ಟೂನ್ ರಚಿಸಿದ್ದರು.

ಠಾಕ್ರೆ ಯಾವತ್ತೂ ಯಮರಾಜನನ್ನು ಸೋಲಿಸಲಿ ಎಂದು ಬಚ್ಚನ್ ಬರೆದಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಲಿಂಗಕಾಮ: ಸರ್ಕಾರದಿಂದ ಕೋರ್ಟ್ ಆದೇಶ ಪರಿಶೀಲನೆ
ಐದರ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ
ಅರುಣಾಚಲ ಯೋಜನೆಗಾಗಿ ಎಡಿಬಿ ನಿಧಿಗೆ ಚೀನ ಅಡ್ಡಿ: ಕೃಷ್ಣ
ವರುಣ್ ಭದ್ರತೆ: ಚಿದು ಭೇಟಿ ತೃಪ್ತಿಕರವಾಗಿಲ್ಲ- ಸುಷ್ಮಾ
ಸತಿ-ಪತಿಗಳಾದ 3 ಜೋಡಿ ಪತಿ-ಪತಿಗಳು!
ಹಜ್ ಯಾತ್ರಿಕರಿಂದ ಹೆಚ್ಚುವರಿ ಹಣ ಕೇಳಿದ ಸಮಿತಿ