ಅರುಣಾಚಲ ಪ್ರದೇಶದಲ್ಲಿನ ನೀರಾವರಿ ಯೋಜನೆಗೆ ಎಡಿಬಿ ಹಣಕಾಸು ನಿಧಿ ಒದಗಿಸಲು ಚೀನ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಬಹುಪಕ್ಷೀಯ ಸಾಲ ಸಂಸ್ಥೆಯ ಸನ್ನದಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬುದಾಗಿ ಸರ್ಕಾರ ರಾಜ್ಯ ಸಭೆಗೆ ಗುರುವಾರ ತಿಳಿಸಿದೆ.
ರಾಜಕೀಯ ಪರಿಗಣನೆಗಳನ್ನು ಯಾವುದೇ ಯೋಜನೆಗಳ ಮೌಲ್ಯಮಾಪನದ ವೇಳೆ ಪರಿಗಣಿಸಬಾರದು ಎಂಬುದಾಗಿ ಭಾರತವು ಎಡಿಬಿಯ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಸ್ಪಷ್ಟಪಡಿಸಿದೆ ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಹೇಳಿದ್ದಾರೆ.
ಭಾರತಕ್ಕೆ ಹಣಕಾಸು ನಿಧಿ ಒದಗಿಸಲು ಚೀನ ಹೊರತು ಪಡಿಸಿದಂತೆ ಎಡಿಬಿಯ ಕಾರ್ಯಕಾರಿ ನಿರ್ದೇಶಕ ಮಂಡಳಿಯ ಇತರ ಎಲ್ಲಾ ರಾಷ್ಟ್ರಗಳು ಬೆಂಬಲಿಸಿವೆ ಎಂಬುದಾಗಿ ಅವರು ತಿಳಿಸಿದರು.
|