ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಸ್ತಿ ಬಹಿರಂಗ: ನ್ಯಾಯಾಂಗವೇ ಮೊದಲು ಚಿಂತಿಸಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಸ್ತಿ ಬಹಿರಂಗ: ನ್ಯಾಯಾಂಗವೇ ಮೊದಲು ಚಿಂತಿಸಲಿ
NRB
ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರವನ್ನು ನಿಗ್ರಹಿಸುವ ಕುರಿತು ಸರ್ಕಾರ ಮತ್ತು ನ್ಯಾಯಾಂಗ ಎರಡೂ ಸೇರಿ ಚರ್ಚಿಸಬೇಕು ಎಂದಿರುವ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ನ್ಯಾಯಮೂರ್ತಿಗಳ ಆಸ್ತಿ ಬಹಿರಂಗ ನಿಯಮದ ಬಗ್ಗೆ ನ್ಯಾಯಾಂಗವೇ ಮೊದಲು ಚಿಂತಿಸಬೇಕು ಎಂದು ಹೇಳಿದ್ದಾರೆ. ಇದು ಜಾಗರಿಯಾಗುವ ಅಗತ್ಯವಿದ್ದು ನ್ಯಾಯಾಂಗದ ಕಡೆಯಿಂದಲೂ ಇದಕ್ಕೆ ವಿರೋಧವಿಲ್ಲ ಎಂದು ಅವರು ಅಭ್ರಿಪ್ರಾಯಿಸಿದ್ದಾರೆ.

ಸಂವಿಧಾನಾತ್ಮಕ ಅಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ಸಮಾಜಕ್ಕೆ ಉತ್ತರದಾಯಿಯಾಗಿರಬೇಕು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ಆಸ್ತಿಬಹಿರಂಗವೂ ಅಪೇಕ್ಷಣೀಯ. ಆದರೆ ವಿಶ್ವದಲ್ಲೇ ವಿಶ್ವಾಸಾರ್ಹ ನ್ಯಾಯಾಂಗ ವ್ಯವಸ್ಥೆ ನಮ್ಮದಾಗಿದ್ದು, ನ್ಯಾಯಾಂಗದೊಂದಿಗೆ ಸಂಘರ್ಷಕ್ಕಿಳಿಯಲು ತಾನು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನ್ಯಾಯಾಂಗ ಸುಧಾರಣೆ ಆಗಬೇಕಿದ್ದರೆ, ನ್ಯಾಯಾಂಗ ಮತ್ತು ಆಡಳಿತದ ನಡುವೆ ಸಾಮರಸ್ಯವಿರಬೇಕು. ಇಲ್ಲದಿದ್ದರೆ, ಅನಗತ್ಯ ಸಂಘರ್ಷದಲ್ಲೇ ಸಮಯ ಶಕ್ತಿ ಪೋಲಾಗುತ್ತದೆ. ಆಡಳಿತ ಸುಧಾರಣೆ ಮತ್ತು ನ್ಯಾಯಾಂಗ ಸುಧಾರಣೆ ಜತೆಜತೆಗೆ ನಡೆಯಬೇಕಿರುವ ಪ್ರಕ್ರಿಯೆಗಳು ಎಂದು ಮೊಯ್ಲಿ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಕಾರ್ಯಕೈಗೊಳ್ಳುವ ತನಕ ಮಾತುಕತೆ ಇಲ್ಲ: ಕೃಷ್ಣ
ಸಮಾನತೆ ,ನ್ಯಾಯಕ್ಕಾಗಿ ಅಧಿಕಾರ : ಮಾಯಾವತಿ
ಎಸ್‌ಪಿಜಿಯಲ್ಲಿ ಮಹಿಳಾ ಐಪಿಎಸ್ ಅಧಿಕಾರಿ
ಬೆದರಿಕೆ ಭಿತ್ತಿಪತ್ರ: ಕಂಧಮಾಲ್ ಮತ್ತೆ ಉದ್ವಿಗ್ನ?
ಗಡಿ: ಕೋರ್ಟ್ ಹೊರಗೆ ಇತ್ಯರ್ಥಕ್ಕೆ 'ಮಹಾ' ಸಿದ್ಧ
ಪೂಂಚ್‌ನಲ್ಲಿ ಚೀನನಿರ್ಮಿತ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆ