ವಿಯೆನ್ನಾದಲ್ಲಿ ಹತ್ಯೆಗೀಡಾಗಿದ್ದ ಸಿಖ್ಗುರು ಡೇರಾ ಸಚ್ಖಾಂಡ್ ಪಂಥದ ನಾಯಕ ಸಂತ ರಮಾನಂದರ ಅಂತ್ಯಕ್ರಿಯೆ ಗುರುವಾರ ಸಾಯಂಕಾಲ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಇಲ್ಲಿ ಬಿಗಿ ಭದ್ರತೆಯಲ್ಲಿ ನಡೆಯಿತು. ರಮಾನಂದರ ಹತ್ಯೆಯು ಪಂಜಾಬಿನಾದ್ಯಂತ ಹಿಂಸಾಚಾರದ ಪ್ರತಿಭಟನೆ ಕಂಡಿತ್ತು.
ಅಸಂಖ್ಯ ಸಂಖ್ಯೆಯ ಭಕ್ತರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ಸೇರಿದಂತೆ ಅನೇಕ ರಾಜಕಾರಣಿಗಳು ಡೇರಾಸಚ್ ಮುಖ್ಯಕಚೇರಿ ಸತ್ಸಂಗ ಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದ ರಮಾನಂದರ ಕಳೇಬರಕ್ಕೆ ಅಂತಿಮ ನಮನ ಸಲ್ಲಿಸಿದರು.
ಜಲಂಧರ್ನಿಂದ 15 ಕಿಲೋಮೀಟರ್ ದೂರದಲ್ಲಿರುವ ಬಲ್ಲನ್ ಪ್ರಾಂತ್ಯವು ಅಕ್ಷರಶಃ ಕಂಟೋನ್ಮೆಂಟ್ ಆಗಿ ಪರಿವರ್ತಿತವಾಗಿತ್ತು. ಬಲ್ಲನ್ ಪ್ರವೇಶದಲ್ಲಿ ಹೆಜ್ಜೆಹೆಜ್ಜೆಗೂ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿತ್ತು.
ರಮಾನಂದರ ಚಿತೆಗೆ ಸ್ಥಳೀಯ ಡೇರಾ ನಾಯಕರಾದ ಸಂತ ಸೂರಿಂದರ್ ದಾಸ್ ಜಿ ಬಾವಾ ಮತ್ತು ಸಂತ ಸೂರಿಂದರ್ ದಾಸ್ (ಕತಾರ್ ವಾಲೆ) ಅವರುಗಳು ಅಗ್ನಿಸ್ಪರ್ಷಿಸಿದರು. |