ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ನಕಲಿ' ತೆಲಗಿಗೆ ಏಳು ವರ್ಷ ಜೈಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ನಕಲಿ' ತೆಲಗಿಗೆ ಏಳು ವರ್ಷ ಜೈಲು
ಬಹುಕೋಟಿ ಛಾಪಾಕಾಗದ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂಲಾಲ ತೆಲಗಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಗುಜರಾತಿಗೆ ಸಂಬಂಧಿಸಿದ ನಕಲಿ ಛಾಪಾಕಾಗದ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯ ತೆಲಗಿಯನ್ನು ತಪ್ಪಿತಸ್ಥನೆಂದು ತೀರ್ಮಾಸಿದೆ.

ತನ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಕನಿಷ್ಠಗೊಳಿಸಬೇಕು ಎಂಬುದಾಗಿ ತೆಲಗಿ, ಶಿಕ್ಷೆ ವಿಧಿಸಿದ ನ್ಯಾಯಾಧೀಶ ಎ.ಪಿ.ಗೋಹಿನ್ ಅವರನ್ನು ವಿನಂತಿಸಿದ್ದಾನೆ.

ಬುಧವಾರ ತೆಲಗಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ ಎಂಬುದಾಗಿ ಆತನ ವಕೀಲ ಭರತ್ ಜೋಷಿ ಹೇಳಿದ್ದಾರೆ. ಅಲ್ಲದೆ ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಸಾದಿಕ್ ಹಾಗೂ ಸಿದ್ದಾರ್ಥ ಗಾಂಧಿ ಎಂಬಿಬ್ಬರೂ ತಪ್ಪೊಪ್ಪಿಕೊಂಡಿರುವುದಾಗಿ ಜೋಷಿ ತಿಳಿಸಿದ್ದಾರೆ.

ತೆಲಗಿ ಹಲವು ಖಾಯಿಲೆಗಳಿಗೆ ತುತ್ತಾಗಿರುವ ಕಾರಣ ತನಗೆ ಕನಿಷ್ಠ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯವನ್ನು ಕೋರಿದನೆಂದು ಜೋಷಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗುಜರಾತಿನಾದ್ಯಂತ ವಿವಿಧೆಡೆ ದಾಳಿ ನಡೆಸಿದ್ದ ಸಿಬಿಐ 25 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಮುಖಬೆಲೆಯ ನಕಲಿ ಛಾಪಾಕಾಗದವನ್ನು ಪತ್ತೆ ಹಚ್ಚಿದೆ. ಈ ಹಗರಣವು ಪ್ರಥಮವಾಗಿ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣಾ ಪ್ರಚಾರಕ್ಕೆ ಹೊಸಹೊಸ ಗಿಮಿಕ್‌!
ಒರಿಸ್ಸಾ: ಆರೆಸ್ಸೆಸ್ ನಾಯಕನ ಗುಂಡಿಕ್ಕಿ ಕೊಲೆ
ಚುನಾವಣೆ ಬಳಿಕ ಕಾಂಗ್ರೆಸ್‌‍‌ನೊಂದಿಗೆ ಮಾತಾಡಬಹುದು: ಕಾರಟ್
ದುರಂತ ತಪ್ಪಿಸಿಕೊಂಡ ರಾಜಧಾನಿ ಎಕ್ಸ್‌ಪ್ರೆಸ್
ಹಣವಂತನಾಗಲು ಹೆತ್ತ ಮಗಳಮೇಲೆ ಅತ್ಯಾಚಾರ!
ಪ್ರಧಾನಿ ಅಭ್ಯರ್ಥಿ: ಅಂತಿಮ ನಿಲುವೇನೆಂದು ಕೇಳಿದ ಕಾಂಗ್ರೆಸ್