ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೇಂದ್ರ ತನಿಖಾ ತಂಡಕ್ಕೆ ರಾಜ್ಯದ ತಿರುಗೇಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇಂದ್ರ ತನಿಖಾ ತಂಡಕ್ಕೆ ರಾಜ್ಯದ ತಿರುಗೇಟು
ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ತನಿಖಾ ತಂಡದ ವಿರುದ್ಧ ಹರಿಹಾಯ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ ಕುಮಾರ್ ಅವರು,ಮಧ್ಯಂತರ ವರದಿ ನೀಡುವುದನ್ನು ಖಂಡಿಸಲಾಗುವುದು ಎಂದು ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನಾ ಸ್ಥಳಗಳ ವೀಕ್ಷಣೆ ಮಾಡಿದ ನಂತರ ವಾಸ್ತವಾಂಶ ಹಾಗೂ ಸರ್ಕಾರ ಕೈಗೊಂಡ ಕ್ರಮಗಳನ್ನು ಗೌಪ್ಯವಾಗಿ ವರದಿ ಮಾಡಲು ಮಧ್ಯಂತರ ತೀರ್ಪು ನೀಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸೋಮವಾರ ಬೆಳಿಗ್ಗೆ ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವಾಲಯದ ಎಂ.ಎನ್.ಕುಮಾವತ್ ಮತ್ತು ಅರುಣ್ ಕುಮಾರ್ ಯಾದವ್ ಗೃಹ ಸಚಿವಾಲಯದ ಪ್ರತಿನಿಧಿಗಳೋ ಅಥವಾ ಯುಪಿಎ ಸರ್ಕಾರದ ಪ್ರತಿನಿಧಿಗಳೋ ಎಂಬ ಅನುಮಾನ ಇದೆ ಎಂದು ಕಿಡಿಕಾರಿದರು.

ಹಿರಿಯ ಅಧಿಕಾರಿಗಳಾದ ಇವರ ನಡವಳಿಕೆ ಹಾಗೂ ಫರ್ಮಾನು ಹೊರಡಿಸುವ ಇವರ ವರ್ತನೆ ಘನತೆಗೆ ಶೋಭೆ ತರುವಂಥದ್ದಲ್ಲ ಎಂದು ಹರಿಹಾಯ್ದರು.

ಸತ್ಯಾಂಶ ಹಾಗೂ ಪರಿಸ್ಥಿತಿಯ ವರದಿಯನ್ನು ಗೌಪ್ಯವಾಗಿ ಇಡುವ ಬದಲು ಬಹಿರಂಗಪಡಿಸಿರುವುದು ಆಶ್ಚರ್ಯಕರ ಎಂದು ಹೇಳಿದರು.
ಮತ್ತಷ್ಟು
ಮದಿರೆ ನೀಡಲು ಮಾನಿನಿಯರಿಗೆ ಅವಕಾಶ:ಹೈಕೋರ್ಟ್
ಎಲ್ಲಾ ತಾಲೂಕಿಗೂ ಆರೋಗ್ಯ ಕವಚ ಯೋಜನೆ:ಸಿಎಂ
ಗೃಹ ಸಚಿವರ ಜೊತೆ ಕೇಂದ್ರ ತಂಡ ಚರ್ಚೆ
ಮಣಿಪಾಲ ಲಾಡ್ಜ್‌‌ನಲ್ಲಿ ತಂಗಿದ್ದು ಇಬ್ಬರು ಉಗ್ರರು?
ಮತಾಂತರ ವಿರೋಧಿ ಕಾಯ್ದೆಗೆ ಪೇಜಾವರಶ್ರೀ ಆಗ್ರಹ
ಚರ್ಚ್‌ ದಾಳಿಗೆ ಸರ್ಕಾರದ ವೈಫಲ್ಯ ಕಾರಣ:ಕೇಂದ್ರ ತಂಡ