ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನೌಶಾದ್ ಕೊಲೆ ವಿಚಾರಣೆಗೆ ಬೇರೆ ಏಜೆನ್ಸಿ ಬೇಡ: ಹೈಕೋರ್ಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೌಶಾದ್ ಕೊಲೆ ವಿಚಾರಣೆಗೆ ಬೇರೆ ಏಜೆನ್ಸಿ ಬೇಡ: ಹೈಕೋರ್ಟ್
NRB
ಮಂಗಳೂರಿನಲ್ಲಿ ಉಗ್ರ ಮಲಬಾರಿ ಪರ ವಕೀಲ ನೌಶಾದ್ ಕಾಸಿಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದಲ್ಲಿ ವರದಿ ನೀಡುವಂತೆ ಹೈಕೋರ್ಟ್ ಬುಧವಾರ ಸರ್ಕಾರಕ್ಕೆ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಂಸ್ಥೆಗಳು ನಡೆಸುವ ತನಿಖೆ ಬಗ್ಗೆ ವಿಶ್ವಾಸ ಇರುವುದರಿಂದ ಹೊರ ರಾಜ್ಯದ ಅಥವಾ ಬೇರೆ ರಾಜ್ಯದ ಏಜೆನ್ಸಿಗಳಿಂದ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದ ನ್ಯಾಯಪೀಠ, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ವಕೀಲ ನೌಶಾದ್ ಖಾಸಿಂ ಅವರನ್ನು ಏಪ್ರಿಲ್ 10ರಂದು ಬರ್ಬರವಾಗಿ ಹತ್ಯೆ ಮಾಡಿದ್ದ ಕುರಿತು ಸಿಕ್ರಂ ಸಂಸ್ಥೆ ಹೈಕೋರ್ಟ್‌ಗೆ ಪತ್ರ ಬರೆದು ಪೊಲೀಸ್ ಅಧಿಕಾರಿಗಳೇ ಹತ್ಯೆಗೆ ಬೆಂಬಲವಾಗಿ ನಿಂತಿದ್ದರಿಂದ ಪ್ರಕರಣದ ಬಗ್ಗೆ ಸಿಬಿಐ ಅಥವಾ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿತ್ತು. ಈ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿದ ಹೈಕೋರ್ಟ್ ಆ ಆದೇಶ ನೀಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಬಿಎಂಪಿ ಆಡಳಿತಾಧಿಕಾರಿ ಮನೆಗೆ ಸಿಬಿಐ ದಾಳಿ
ಬಳ್ಳಾರಿ ಅಕ್ರಮ ಗಣಿಗಾರಿಕೆ ಮುಚ್ಚಿಸುವೆ: ಜೈರಾಮ್
ಲಿಂಗಾಯಿತ ಹಿಂದುಳಿದ ವರ್ಗವಲ್ಲ: ಆಯೋಗ
ರಾಜ್ಯಕ್ಕೆ ಕೇಂದ್ರದಿಂದ ಆರ್ಥಿಕ ನೆರವು
ನ್ಯಾಯಬೆಲೆ ಅಂಗಡಿ-ಮೋಸ ಮಾಡಿದ್ರೆ ಜಾಗ್ರತೆ: ಸಿಎಂ
ಸಿಎಂಗೆ ಗಡುವು ವಿಧಿಸುವುದು ಸರಿಯಲ್ಲ: ಧನಂಜಯ್