ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಲಾವಿದರ 'ಕಣ್ಣಂಚಲಿ' ಹುಟ್ಟಿದ ಪ್ರೀತಿ (Gandhinagar | kannada cinema | S Narayan)
ಸುದ್ದಿ/ಗಾಸಿಪ್
Feedback Print Bookmark and Share
 
NRB
ಚಿತ್ರಕಲಾವಿದರಿಬ್ಬರು ಬರೆದ ಚಿತ್ರವನ್ನು ನೋಡುವ ನಾಯಕಿ ಚಿತ್ರ ಬರೆದ ಇಬ್ಬರಲ್ಲಿ ಒಬ್ಬರನ್ನು ಪ್ರೀತಿಸುತ್ತಾಳೆ. ಆದರೆ ಆ ಚಿತ್ರ ಬರೆದವನು ಯಾರೋ ಆ ಹುಡುಗಿ ಪ್ರೀತಿ ಮಾಡುವುದು ಮತ್ತಿನ್ಯಾರನ್ನೋ- ಇಂತಹ ತ್ರಿಕೋನ ಪ್ರೇಮಕತೆಯೊಂದಿಗೆ ಗಾಂಧಿನಗರಕ್ಕೆ ಬಂದಿದ್ದಾರೆ ನಿರ್ದೇಶಕ ರವಿ ಪೂಜಾರ್.

ಚಿತ್ರದ ಹೆಸರು ಕಣ್ಣಂಚಲಿ. ಫೈನ್ ಆರ್ಟ್ ಓದಿರುವ ರವಿ ಪೂಜಾರ್ ಮೊದಲ ಬಾರಿಗೆ ಚಿತ್ರವನ್ನು ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಮೊದಲು ಎಸ್. ನಾರಾಯಣ್ ಮತ್ತು ಎಸ್ ಗೋವಿಂದ್ ಜೊತೆ ಕೆಲಸ ಮಾಡಿದ ಅನುಭವ ಅವರಿಗಿದೆ. ಇದೊಂದು ಲವ್ ಸ್ಟೋರಿಯಾದರೂ ಒಂಥರಾ ಡಿಫರೆಂಟ್ ಸ್ಟೋರಿ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕರು.

ಚಿತ್ರಕ್ಕೆ ಅನಿಲ್, ಶ್ರೀರಾಮ್ ನಾಯಕರು. ಶ್ವೇತಾ ನಾಯಕಿ. ಕರಿಯಾ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡ ಅನಿಲ್ ಈ ಚಿತ್ರದಲ್ಲಿ ಹೀರೋ ಆಗಿರುವುದಕ್ಕೆ ಸಂತಸವಿದೆ. ಹಾಸ್ಯ ನಟ ಉಮೇಶ್ ಮೊದಲ ಬಾರಿಗೆ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಒಂದು ಕೋಟಿ ರೂಪಾಯಿಯಲ್ಲಿ ಚಿತ್ರ ಮುಗಿಸುವ ಯೋಜನೆಯನ್ನು ನಿರ್ಮಾಪಕ ಚಂದ್ರಶೇಖರ್ ಯೋಜಿಸಿದ್ದಾರೆ. ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಾಯಕನಾಗಬೇಕೆಂಬ ಹಂಬಲದಿಂದ ಚಿತ್ರರಂಗಕ್ಕೆ ಬಂದೆ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದೇನೆ. ನಿರ್ಮಾಣ ಮಾಡಬೇಕೆಂಬ ಬಹುದಿನದ ಕನಸು ಇದೀಗ ಈಡೇರಿದೆ ಎನ್ನುತ್ತಾರೆ ಅವರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಾಂಧಿನಗರ, ಕನ್ನಡ ಸಿನಿಮಾ, ಕರಿಯಾ, ಎಸ್ ನಾರಾಯಣ್