ಮುಂಗಾರು ಮಳೆ ಜೋರಾಗಿಯೇ ಆರಂಭವಾಗಿದೆ. ಮಳೆಯಲ್ಲಿ ಚಿತ್ರೀಕರಣ ನಡೆಸಬೇಕೆಂದು ಉದ್ದೇಶಿದಿದ್ದ ಮಳೆ ಬರಲಿ ಮಂಜೂ ಇರಲಿ ಚಿತ್ರತಂಡ ಈಗ ಚುರುಕಾಗಿ ಚಿತ್ರೀಕರಣ ನಡೆಸುತ್ತಿದೆ. ಮಲೆನಾಡಿನ ಸುಂದರ ತಾಣಗಳನ್ನು ಸೆರೆ ಹಿಡಿಯುವ ಕಾಯಕದಲ್ಲಿ ತೊಡಗಿದ್ದಾರೆ.
ಚಿತ್ರಕ್ಕೆ ಪೂರಕವಾಗಿ ಗುಡ್ಡಗಾಡು ಪ್ರದೇಶವನ್ನು ಆಯ್ಕೆಮಾಡಲಾಗಿತ್ತು. ಅಲ್ಲಿವರೆಗೂ ವಾಹನದಲ್ಲಿ ಸಲಕರಣೆಯನ್ನು ತೆಗೆದುಕೊಂಡು ಹೋಗುವುದು ಕಷ್ಟ. ಹೆಗಲಲ್ಲೇ ಹೊತ್ತುಕೊಂಡು ಹೋಗಬೇಕು. ಮಂಜು, ಮಳೆ ಫೀಲ್ ಬೇಕಿದ್ದರಿಂದ ನೈಜ ಮಳೆ ಅನಿವಾರ್ಯವಾಗಿತ್ತು ಎನ್ನುತ್ತಾರೆ ನಿರ್ದೇಶಕಿ ವಿಜಯ್ಲಕ್ಷ್ಮಿ ಸಿಂಗ್.
MOKSHENDRA
ಮುಂಗಾರಿಗಾಗಿ ಕಾದು ಕುಳಿತು ಚಿತ್ರ ಮಾಡುತ್ತಿರುವ ಸಂಖ್ಯೆ ಕಡಿಮೆ. ಹಿಂದೆ ಮುಂಗಾರಿನ ಮಿಂಚು ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದ ವಿಜಯಲಕ್ಷ್ಮಿ ಸಿಂಗ್ ಮಳೆಯಲ್ಲಿ ಚಿತ್ರೀಕರಿಸಲು ಯೋಜನೆ ಹಾಕಿಕೊಂಡಿದ್ದರಂತೆ. ಒಂದು ವೇಳೆ ಮಳೆ ಕೈಕೊಟ್ಟರೆ ತೊಂದರೆಯಾಗಬಾರದು ಎಂದು ಕೃತಕ ಮಳೆಯಲ್ಲಿ ಚಿತ್ರಿಸಲು ಏರ್ಪಾಟು ಮಾಡಲಾಗಿತ್ತು. ಆದರೆ ಚಿತ್ರೀಕರಣ ಮುಗಿಯುವವರೆಗೂ ವರುಣ ದೇವ ಕೈಕೊಟ್ಟಿಲ್ಲ ಎನ್ನುತ್ತಾರೆ ವಿಜಯಲಕ್ಷ್ಮಿ ಸಿಂಗ್.