ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಂಜುನಾಥನಿಗೆ ದಾರಿ ಬಿಡಿ (Eddelu Manjunatha | Guruprasad | Sanath Kumar)
ಸುದ್ದಿ/ಗಾಸಿಪ್
Feedback Print Bookmark and Share
 
ಗುರುಪ್ರಸಾದ್ ನಿರ್ದೇಶನದ ಎದ್ದೇಳು ಮಂಜುನಾಥ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ನೀಡಿದೆ. ಅಂತೂ ಮೂರು ವರ್ಷಗಳ ನಿರಂತರ ಕಾರ್ಯದಲ್ಲಿ ತೊಡಗಿದ್ದ ನಿರ್ಮಾಪಕ ಸನತ್ ಕುಮಾರ್ ಸೆನ್ಸಾರ್ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರದ ಸಂಭಾಷಣೆಯಲ್ಲಿ ನಾಲ್ಕೈದು ತುಣುಕುಗಳಿಗೆ ಮಾತ್ರ ನಿರ್ಬಂಧ ಮಾಡಿರುವುದು ಬಿಟ್ಟರೆ ಉಳಿದಂತೆ ತುಂಬಾ ಚೆನ್ನಾಗಿ ಎಂದು ಚಂದ್ರಶೇಖರ್ ಸನತ್ ಕುಮಾರ್ ಅವರ ಬೆನ್ನು ತಟ್ಟಿದ್ದರಂತೆ. ಹಾಸ್ಯ ಪ್ರಧಾನವಾದ ಈ ಚಿತ್ರ ಎಲ್ಲರ ಮನ ಸೂರೆಗೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂಬುದು ನಿರ್ಮಾಪಕರ ಅಭಿಪ್ರಾಯ.

ಅದೇನೇ ಇರಲಿ, ಚಿತ್ರವನ್ನು ಮೂರೇ ವಾರದಲ್ಲಿ ಬಿಡುಗಡೆಗೊಳಿಸಲು ಯೋಜನೆ ಹಾಕಿಕೊಂಡಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಮೊದಲ ಬಾರಿಗೆ ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ನಿನ ಚಿತ್ರ ಬಿಡುಗಡೆಯಾಗುತ್ತಿರುವುದು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎದ್ದೇಳು ಮಂಜುನಾಥ, ಗುರುಪ್ರಸಾದ್, ಸನತ್ ಕುಮಾರ್