ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಪುತ್ತಿಗೆ ಶ್ರಿಗಳು
ಗುರುಗಳಿಂದ ಬಂದ ಕೃಷ್ಣನ ಪೂಜೆಯನ್ನು ತಮ್ಮಿಂದ ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಪ್ರಕಟಿಸಿರುವುದರಿಂದ ಉಡುಪಿ ಪರ್ಯಾಯ ಪೀಠಾರೋಹಣ ವಿವಾದ ಮತ್ತೊಂದು ತಿರುವು ಪಡೆದಿದೆ.

ತಾವು ವಿದೇಶ ಪ್ರಯಾಣ ಮಾಡಿರುವ ಹಿನ್ನೆಲೆಯಲ್ಲಿ ತಮಗೆ ಪರ್ಯಾಯ ಅವಕಾಶ ನೀಡಬಾರದು ಎಂದು ಇತ್ತೀಚಿಗೆ ಎದ್ದಿರುವ ಕೂಗಿನ ಬಗ್ಗೆ ಪ್ರತಿಕ್ರಿಯಿಸಿದ ಅವರು ತಾವು ವಿದೇಶಕ್ಕೆ ಕದ್ದುಮುಚ್ಚಿ ರಾತ್ರೋರಾತ್ರಿ ಓಡಿಹೋಗಿಲ್ಲ. ತಮ್ಮ ಯಾತ್ರೆಯ ಬಗ್ಗೆ ಈಗ ಆಕ್ಷೇಪಿಸುತ್ತಿರುವ ಉಳಿದ ಮಠಾಧೀಶರಿಗೆ ಗೊತ್ತಿತ್ತು ಎಂದು ಪರ್ಯಾಯ ಪೀಠಾರೋಹಣಕ್ಕೆ ಸಂಬಂಧಪಟ್ಟ ಧಾನ್ಯ ಮುಹೂರ್ತ ಕಾರ್ಯಕ್ರಮದಲ್ಲಿ ಅವರು ತಿಳಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ದೇವಾಲಯ ಮತ್ತು ಅದರ ಅಷ್ಟ ಮಠಗಳಲ್ಲಿ ಇನ್ನುಮುಂದೆ ಪರ್ಯಾಯೋತ್ಸವ, ಏಕಾದಶಿ ಆಚರಣೆ, ಅಥವಾ ಮಾಧ್ವ ಸಂಪ್ರದಾಯದ ಇನ್ನಾವುದೇ ಆಚರಣೆಗೆ ಸಂಬಂಧಿಸಿದಂತೆ ಗೊಂದಲವಾಗದಂತೆ ಲಿಖಿತ ಸಂವಿಧಾನ ರಚನೆ ಪ್ರಸ್ತಾಪವನ್ನು ಮಾಡಿದ ಅವರು ಈ ಕುರಿತ ಸಂವಿಧಾನ ರಚನೆಗೆ ತ್ರಿ ಸದಸ್ಯ ಮಂಡಳಿಯನ್ನು ರಚಿಸಲಾಗುವುದು ಎಂದು ಘೋಷಿಸಿದ್ದಾರೆ.
ಮತ್ತಷ್ಟು
ಬುಧವಾರ ಜೆಡಿಎಸ್ ಬಂಡಾಯ ಸಭೆ
ವಿಧಾನಸಭೆ ವಿಸರ್ಜನೆಗೆ 3 ಪಕ್ಷಗಳ ಸ್ವಾಗತ
ಬಿರುಸುಗೊಂಡ ರಾಜಕೀಯ ಚಟುವಟಿಕೆ
ಪಕ್ಷ ತೊರೆಯುವವರಿಗೆ ದೇವೇಗೌಡರ ಬೀಳ್ಕೊಡುಗೆ
ಗೌಡರ ವಿರುದ್ಧ ಎಂ.ಪಿ.ಪ್ರಕಾಶ್ ಆಕ್ರೋಶ
ಉಗ್ರರ ಭೀತಿ: ವಿಧಾನ-ವಿಕಾಸ ಸೌಧಗಳಿಗೆ ಭದ್ರತೆ ಹೆಚ್ಚಳ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com