ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದೆಹಲಿ ಸ್ಫೋಟಕ್ಕೆ ಉಡುಪಿಯಿಂದ 10 ಬಾಂಬ್ ‌‌‌!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ ಸ್ಫೋಟಕ್ಕೆ ಉಡುಪಿಯಿಂದ 10 ಬಾಂಬ್ ‌‌‌!
ದೆಹಲಿ ಸರಣಿ ಸ್ಫೋಟಕ್ಕೆ ಉಪಯೋಗಿಸಿರುವ ಬಹುತೇಕ ಬಾಂಬ್ ಗಳು ಉಡುಪಿಯಿಂದಲೇ ರವಾನೆಯಾಗಿತ್ತು ಎಂಬ ಮಹತ್ವದ ಅಂಶ ಬಹಿರಂಗಗೊಂಡಿದೆ.

ಆಗಸ್ಟ್ 28ರಂದು ನಗರಕ್ಕೆ ಬಂದಿದ್ದ ಇಬ್ಬರು ಶಂಕಿತ ಉಗ್ರರುಗಳಾದ ಸೈಫ್ ಹಾಗೂ ಪರಾರಿಯಾಗಿರುವ ಇನ್ನೊಬ್ಬ ಶಂಕಿತ ಉಗ್ರ ಶದಾಬ್ ಅವರುಗಳು ನಿಜಾಮುದ್ದೀನ್-ಎರ್ನಾಕುಲಂ ಮಂಗಳಾ ಎಕ್ಸ್ ಪ್ರೆಸ್ ರೈಲಿನಲ್ಲಿ ಉಡುಪಿ ಬಂದಿದ್ದರು.

ಬಳಿಕ ಆ ದಿನವೇ ಮತ್ತೆ ದೆಹಲಿಗೆ ತೆರಳಿದಾಗ 10 ಬಾಂಬ್ ಗಳನ್ನು ಒಯ್ದಿದ್ದರು ಎಂದು ತನಿಖೆಯಿಂದ ತಿಳಿದು ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ನಡೆಸುವ ಎಲ್ಲಾ ಸ್ಫೋಟಗಳಿಗೂ ಕರ್ನಾಟಕದಿಂದಲೇ ಪೂರೈಕೆಯಾಗಿದೆ. ದೆಹಲಿ ಸ್ಫೋಟದ ಸಂಬಂಧ ಇತ್ತಿಚೆಗಷ್ಟೇ ಪೊಲೀಸರು ಮಣಿಪಾಲ ವಿಶ್ವವಿದ್ಯಾಲಯ ಕ್ಯಾಂಪಸ್‌‌‌ನಿಂದ ಒರ್ವ ಶಂಕಿತ ಉಗ್ರನನ್ನು ವಶಪಡಿಸಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು
ಹೆರಾಯಿನ್ ಸಾಗಿಸುತ್ತಿದ್ದ ವಿದ್ಯಾರ್ಥಿನಿ ಬಂಧನ
ದಾಳಿಯಿಂದ ತಲೆ ತಗ್ಗಿಸುವಂತಾಗಿದೆ:ಯಡಿಯೂರಪ್ಪ
ಸೂಕ್ಷ್ಮ ಪ್ರದೇಶ ಭದ್ರತೆಗೆ ಇಂಡಿಯಾ ಮೀಸಲು ಪಡೆ
ಬಿಬಿಎಂಪಿ ಚುನಾವಣೆ: ಹೈಕೋರ್ಟ್‌ಗೆ ರಿಟ್
ಚರ್ಚ್ ದಾಳಿ: ಕಾಂಗ್ರೆಸ್‌ನಿಂದ ರಾಜಭವನ ಚಲೋ
ಯಡಿಯೂರಪ್ಪಗೆ ಅಹಂಕಾರ:ವಿ.ಎಸ್.ಉಗ್ರಪ್ಪ