ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಳ್ಳಾರಿ : ಭೀಕರ ಅಪಘಾತಕ್ಕೆ 15 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಳ್ಳಾರಿ : ಭೀಕರ ಅಪಘಾತಕ್ಕೆ 15 ಬಲಿ
ಮದುವೆಗೆಂದು ಹೊರಟವರು ಮಸಣ ಸೇರಿದರು...
ಮದುವೆ ಕಾರ್ಯಕ್ರಮಕ್ಕಾಗಿ ಟೆಂಪೋ ಟ್ರ್ಯಾಕ್ಸ್‌ವೊಂದು ಗುರುವಾರ ಬೆಳಿಗ್ಗೆ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 15ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಇಲ್ಲಿನ ವೇಣಿವೀರಾಪುರದಲ್ಲಿ ನಡೆದಿದೆ.

ಮದುವೆ ಸಮಾರಂಭಕ್ಕೆ ಹೊರಟಿದ್ದ ವ್ಯಾನು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಿಕ್ಕ ಮಗು ಸೇರಿ 15 ಮಂದಿ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೀಮಂತ್ ಸಿಂಗ್ ಕುಮಾರ್ ತಿಳಿಸಿದ್ದಾರೆ.

ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತಪಟ್ಟವರಲ್ಲಿ ಆರು ಮಹಿಳೆಯರು, 8ಪುರುಷರು ಹಾಗೂ ಒಂದು ಮಗು ಕೂಡ ಸೇರಿದೆ.

ಮೃತಪಟ್ಟವರು ಗದಗ ಜಿಲ್ಲೆಯ ನಿಡಗುಂದಿ ಗ್ರಾಮಕ್ಕೆ ಸೇರಿದವರು. ಪೊಲೀಸ್ ವರಿಷ್ಠಾಧಿಕಾರಿ ಸೀಮಂತ್ ಕುಮಾರ್ ಸಿಂಗ್ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಟೆಂಪೋದಲ್ಲಿ 25 ಮಂದಿ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣೆ: ರಣರಂಗವಾದ ಮೈಸೂರು ಪಾಲಿಕೆ
ಪಿಯು ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ: ಕಾಗೇರಿ
ಪ್ರಾದೇಶಿಕ ಸಮಸ್ಯೆ ಜೆಡಿಎಸ್ ಚುನಾವಣಾ ಆಸ್ತ್ರ
'ಭಗೀರಥ'ನಾದ ಸಚಿವ: ಭಕ್ತರಿಗೆ ಗಂಗಾ ಜಲ!
ಇಂದಿನಿಂದ ಅಧಿವೇಶನ: ವಾಗ್ದಾಳಿಗೆ ಸಜ್ಜಾದ ಪ್ರತಿಪಕ್ಷ
ಹೊಗೇನಕಲ್‌‌ಗೆ ಕೇಂದ್ರ ಗ್ರೀನ್ ಸಿಗ್ನಲ್: ಪ್ರತಿಭಟನೆ