|
ದಳದ ಮತ್ತೊಂದು ವಿದಳನೆಗೆ ವೇದಿಕೆ ಸಜ್ಜು?
|
|
|
ಬೆಂಗಳೂರು, ಗುರುವಾರ, 29 ನವೆಂಬರ್ 2007( 11:08 IST )
|
|
|
|
|
|
|
|
ಕ್ಷಣ ಕ್ಷಣಕ್ಕೆ ಬದಲಾಗುತ್ತಿದ್ದ ಕರ್ನಾಟಕ ರಾಜಕೀಯಕ್ಕೆ ವಿಧಾನಸಭೆ ವಿಸರ್ಜನೆಯ ಅಧಿಕೃತ ಘೋಷಣೆಯು ತೆರೆ ಹಾಕಿರುವುದರೊಂದಿಗೆ, ಪಶ್ಚಾತ್ ಕಂಪನ ಮಾದರಿಯಲ್ಲಿ ಜನತಾ ದಳವು ಒಡಕಿನ ಅಂಚಿಗೆ ಬಂದು ತಲುಪಿದೆ.
ಚುನಾವಣೆಗಳು ಘೋಷಣೆಯಾಗಲಿರುವ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಜೆಡಿಎಸ್ನ ಅಧಿಕೃತ ಕಾರ್ಯಕಾರಿಣಿ ಸಭೆಯಲ್ಲಿ ಹೊರಬರುವ ತೀರ್ಮಾನಗಳ ಬಗ್ಗೆ ರಾಜಕೀಯ ವಲಯದ ಕುತೂಹಲ ಹೆಚ್ಚಿದೆ. 11.30 ಗಂಟೆಯ ಸುಮಾರಿಗೆ ಸಭೆ ಆರಂಭವಾಗಲಿದ್ದು, ಭಿನ್ನಮತೀಯ ಶಾಸಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದು ಎಲ್ಲರ ಕುತೂಹಲ.
ನಿನ್ನೆಯ ಎಂ.ಪಿ.ಪ್ರಕಾಶ್ ನೇತೃತ್ವದ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿದ್ದ 17 ಎಂ.ಎಲ್.ಎ.ಗಳು ಹಾಗೂ 3 ಎಂ.ಎಲ್.ಸಿ.ಗಳು ಇಂದಿನ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಮೇಲಾಗಿ ಈ ಸಭೆ ಏಕಪಕ್ಷೀಯ ಸಭೆ ಹಾಗೂ ಬಹಿರಂಗ ಸಭೆಯಷ್ಟೇ ಎಂದು ಪ್ರಕಾಶ್ ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲಿ ಈ ಸಭೆಗೆ ಪ್ರಾಮುಖ್ಯತೆ ಬಂದಿದೆ.
ಇಂದಿನ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಪಕ್ಷದ ಬಲವರ್ಧನೆಗೆ ಸಹಾಯವಾಗಲಿದೆಯೇ ಅಥವಾ ಮತ್ತೊಮ್ಮೆ ಹೋಳಾಗುವ ಪ್ರಕ್ರಿಯೆಗೆ ಅನುವು ಮಾಡಿಕೊಡಲಿದೆಯೇ ಎಂಬುದರೆಡೆಗೆ ಎಲ್ಲರೂ ಕಾದುನೋಡುವಂತಾಗಿದೆ.
|
|
|
|
|
|
|
|