ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭಾರೀ ಮಳೆಯಿಂದ ಲೋಡ್‌ಶೆಡ್ಡಿಂಗ್ ರದ್ದು: ಈಶ್ವರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರೀ ಮಳೆಯಿಂದ ಲೋಡ್‌ಶೆಡ್ಡಿಂಗ್ ರದ್ದು: ಈಶ್ವರಪ್ಪ
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಲೋಡ್ ಶೆಡ್ಡಿಂಗ್ ಅನ್ನು ಅಧಿಕೃತವಾಗಿ ತಡೆಹಿಡಿಯಲು ಸರ್ಕಾರ ನಿರ್ಧರಿಸಿದೆ.ಮಳೆಯಿಂದ ಲಿಂಗನಮಕ್ಕಿ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ಸ್ ನೀರು ಬಂದಿದೆ. ಇದರಿಂದ ನೀರಿನ ಅಭಾವದ ಆತಂಕ ಕರಗಿದ್ದು, ವಿದ್ಯುತ್ ಕಡಿತದ ಪರಿಣಾಮದಿಂದ ಸಧ್ಯಕ್ಕೆ ರಾಜ್ಯ ಪಾರಾಗಿದೆ ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ಥರ್ಮಲ್ ಘಟಕಗಳನ್ನೇ ನೆಚ್ಚಿಕೊಂಡು ವಿದ್ಯುತ್ ಪೂರೈಸಲಾಗುತ್ತಿದೆ. 7 ಘಟಕಗಳಿಗೆ ತಿಂಗಳಿಗೆ ಆಗುವಷ್ಟು ಕಲ್ಲಿದ್ದಲು ಸಂಗ್ರಹಿಸಿಡಲಾಗಿದೆ. ಪ್ರತಿದಿನ 90 ಮಿಲಿಯನ್ ಯೂನಿಟ್ ಬೇಡಿಕೆ ಇದ್ದು ಅಷ್ಟೇ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ತದಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಇದೇ ತಿಂಗಳ 10ರಂದು ನಗರದಲ್ಲಿ ಜನಪ್ರತಿನಿಧಿಗಳು, ಪರಿಸರಾಸಕ್ತ ಸೇರಿದಂತೆ ತಜ್ಞರ ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಮತ್ತಷ್ಟು
ಕುಮಾರಸ್ವಾಮಿ, ನಾಯ್ಕ್ ವಿರುದ್ಧದ ಕೇಸು ವಜಾ
ತಿಂಗಳೊಳಗೆ ಕ್ರಿಯಾ ಯೋಜನೆ: ಸಿಎಂ ತಾಕೀತು
ನಾನೇನೂ ವಲಸಿಗನಲ್ಲ: ದೇಶಪಾಂಡೆ ಸ್ಪಷ್ಟನೆ
ಇನ್ನು ಇತರ ಅಂಗಡಿಗಳಲ್ಲೂ ವೈನ್ ಲಭ್ಯ
ಉಪ್ಪುಂದ ಬಳಿ ಅಪಘಾತ: 2 ಮಹಿಳೆಯರ ಸಹಿತ 4 ಬಲಿ
ಬಜೆಟ್ ಬಡವರ ಮುಂಗಡ ಪತ್ರ: ದೇಶಪಾಂಡೆ