ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರಿನಲ್ಲಿ ಮಣಿಪುರದ ಉಗ್ರನ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿನಲ್ಲಿ ಮಣಿಪುರದ ಉಗ್ರನ ಬಂಧನ
ಭಾರತದ ಪಶ್ಚಿಮ ಭಾಗ ಮಾತ್ರವಲ್ಲ, ಬಾಂಗ್ಲಾಕ್ಕೆ ಹೊಂದಿಕೊಂಡಿರುವ ಪೂರ್ವಭಾಗದಲ್ಲಿಯೂ ಉಗ್ರವಾದ ಮೇಳೈಸಿರುವ ಮಣಿಪುರದ ಶಂಕಿತ ಪ್ರತ್ಯೇಕತಾವಾದಿ ಸಂಘಟನೆಯ ಉಗ್ರಗಾಮಿಯೊಬ್ಬ ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ್ದಾನೆ.

ರೋಶನ್ ಅಲಿ ಅಲಿಯಾಸ್ ಅನೀಸ್ ಹೆಸರಿನ ಈತ ನಿಷೇಧಿತ ಪೀಪಲ್ಸ್ ಯುನೈಟೆಡ್ ಲಿಬರೇಶನ್ ಫ್ರಂಟ್ - (ಪಿಯುಎಲ್ಎಫ್) ಆಜಾದ್ ಬಣದ ನಾಯಕನಾಗಿದ್ದು, ಮಣಿಪುರ ಪೊಲೀಸರು ಮತ್ತು ನಗರದ ಅಪರಾಧ ಪತ್ತೆ ದಳದ ಜಂಟಿ ಕಾರ್ಯಾಚರಣೆಯಲ್ಲಿ ಮಹಾದೇವಪುರದ ಸಿಂಗನಪಾಳ್ಯ ಎಂಬಲ್ಲಿ ಸೋಮವಾರ ರಾತ್ರಿ ಸೆರೆ ಸಿಕ್ಕಿದ್ದಾನೆ.

ಕೊಲೆ, ಕೊಲೆ ಯತ್ನ ಮುಂತಾದ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಅನೀಸ್, 16 ತಿಂಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು ಇಲ್ಲೇ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇದೀಗ ಆತನನ್ನು ಮಣಿಪುರ ಪೊಲೀಸರು ಕರೆದೊಯ್ದಿದ್ದಾರೆ.

ಇದರೊಂದಿಗೆ ಬೆಂಗಳೂರು ಉಗ್ರಗಾಮಿಗಳಿಗೆ ಸುರಕ್ಷಿತ ಸ್ಥಾನವಾಗುತ್ತಿದೆಯೇ ಎಂಬ ಸಂದೇಹವೂ ಜನತೆಯನ್ನು ಕಾಡತೊಡಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯ ವಿಧಾನಸಭೆ ಮುಂಗಾರು ಅಧಿವೇಶನ
ಬಸ್ ಪ್ರಯಾಣ ದರ ಶೇ.3.56 ಹೆಚ್ಚಳ
ಭಾರೀ ಮಳೆಯಿಂದ ಲೋಡ್‌ಶೆಡ್ಡಿಂಗ್ ರದ್ದು: ಈಶ್ವರಪ್ಪ
ಕುಮಾರಸ್ವಾಮಿ, ನಾಯ್ಕ್ ವಿರುದ್ಧದ ಕೇಸು ವಜಾ
ತಿಂಗಳೊಳಗೆ ಕ್ರಿಯಾ ಯೋಜನೆ: ಸಿಎಂ ತಾಕೀತು
ನಾನೇನೂ ವಲಸಿಗನಲ್ಲ: ದೇಶಪಾಂಡೆ ಸ್ಪಷ್ಟನೆ